26th June 2025
Share

 TUMAKURU:SHAKTHIPEETA FOUNDATION

ಪ್ರತಿ ವರ್ಷ ಒಂದೊಂದು ವಿಧಾನಸಭಾ ಕ್ಷೇತ್ರದಂತೆ, ನಿರಂತರವಾಗಿ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಮ್ಮೇಳನ ನಡೆಸಲು ದಿನಾಂಕ:22.06.2025 ರಂದು ಶಕ್ತಿಭವನದಲ್ಲಿ ನಡೆದ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. ಕೊರಟಗೆರೆ ಪರಿವರ್ತನ ಕೃಷಿ ಆಶ್ರಮದ ಶ್ರೀ ಶಿವಕುಮಾರ್‍ರವರು, ಈ ವಿಷಯವನ್ನು ಸಭೆಯಲ್ಲಿ ಮಂಡಿಸಲು ಪ್ರಸ್ತಾಪ ಇಟ್ಟಿದ್ದರು.

1.       ಕೃಷಿ ಆಶ್ರಮಗಳ ಚಟುವಟಿಕೆಗೆಳಿಗೆ ಒತ್ತು ಕೊಡಬೇಕೆ ?

2.       ಕೃಷಿ ಆಶ್ರಮಗಳ ಉತ್ಪನ್ನಗಳ ಮಾರಾಟಕ್ಕೆ ಒತ್ತು ಕೊಡಬೇಕೆ ?

3.       ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಒತ್ತು ಕೊಡಬೇಕೆ?

4.       ಕೃಷಿ ಆಶ್ರಮಗಳ ಚಟುವಟಿಕೆಗಳನ್ನು ಜನರಿಗೆ ತಲುಪಿಸಲು ಒತ್ತು ಕೊಡಬೇಕೆ?

5.       ಕೃಷಿ ಆಶ್ರಮಗಳ ನೇತೃತ್ವದಲ್ಲಿ ಕನ್ನೇರಿ ಶ್ರಿಗಳ ಪರಿಕಲ್ಪನೆಯ ದಿವ್ಯಭಾರತ ಮಾದರಿಯಲ್ಲಿ ನಂಬರ್ ಒನ್ ಕರ್ನಾಟಕ @ 2047 ಚಟುವಟಿಕೆಗಳಿಗೆ ಒತ್ತು ಕೊಡಬೇಕೆ?

ಎಂಬ ಬಗ್ಗೆ ಚರ್ಚೆ ನಡೆದಿದೆ. ತುಮಕೂರು ಜಿಲ್ಲೆಯಲ್ಲಿಯೇ ಪ್ರಥಮ ಸಮ್ಮೇಳನ ನಡೆಸೋಣ, ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲು ವಿಷಯ ಮಂಡಿಸಿದ, ಕೊರಟಗೆರೆ ಶಿವಕುಮಾರ್‍ರವರ ನೇತೃತ್ವದಲ್ಲಿ,  ತುಮಕೂರು ಜಿಲ್ಲಾ ಕೃಷಿ ಆಶ್ರಮಗಳ ಸಂಘಟನೆಗೆ ಮುಂದೆ ಬಂದಿರುವ ಅಮ್ಮನಘಟ್ಟ ಮಹೇಶ್, ಬೀರಸಂದ್ರದ ಮೋಹನ್ ಕುಮಾರ್ ಸೇರಿದಂತೆ, ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಲಾ ಇಬ್ಬರಿಗೆ ಕಡಿಮೆ ಇಲ್ಲದಂತೆ ಒಂದು ಸಮಿತಿ ರಚಿಸಿ ವರದಿ ನೀಡಲಿ, ನಂತರ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯಲ್ಲಿ ಮಂಡಿಸಿ, ಅಂತಿಮ ನಿರ್ಧಾರ ಕೈಗೊಳ್ಳೋಣ ಎಂದು ನಿರ್ಣಯ ಮಾಡಲಾಗಿದೆ.

1008 ಕೃಷಿ ಆಶ್ರಮಗಳಲ್ಲಿ, ಮೊದಲ ಹಂತದಲ್ಲಿ ಈ ವರ್ಷವೇ ಈಗಾಗಲೇ ರಚಿಸಿರುವ ಕೃಷಿ ಆಶ್ರಮಗಳು ಸೇರಿದಂತೆ, 344 ಕೃಷಿ ಆಶ್ರಮಗಳು/ಸಂಚಾಲಕರುಗಳನ್ನು ಆಯ್ಕೆ ಮಾಡಿ,

ಈ ವಿಷಯಗಳು ಸೇರಿದಂತೆ 344 ವಿಷಯಗಳ ಪಟ್ಟಿ ಮಾಡಿ, ಪ್ರತಿಯೊಂದು ವಿಷಯವಾರು ನಾಲೇಡ್ಜ್ ಬ್ಯಾಂಕ್ @ 2047 ಜ್ಞಾನಿಗಳನ್ನು ಗುರುತಿಸುವ ಕಾರ್ಯಗಳನ್ನು ಕೃಷಿ ಆಶ್ರಮಗಳ ನೇತೃತ್ವದಲ್ಲಿ/ಸಹಭಾಗಿತ್ವದಲ್ಲಿ ಮಾಡಲು ನಿರ್ಣಯ ಮಾಡಲಾಗಿದೆ.

ಆಸಕ್ತರು ಮಾರ್ಗದರ್ಶನ ನೀಡಬಹುದಾಗಿದೆ.