27th June 2025
Share

TUMAKURU:SHAKTHIPEETA FOUNDATION

ವಾಣಿ ವಿಲಾಸ ಡ್ಯಾಂ ನಿರ್ಮಾಣವೇ ಒಂದು ಇತಿಹಾಸ, ನಾನು 2004 ರಲ್ಲಿ ವಾಣಿವಿಲಾಸ ಡ್ಯಾಂ ಅನ್ನು ಮಧ್ಯ ಕರ್ನಾಟಕದ ವಾಟರ್ ಬ್ಯಾಂಕ್’ ಎಂದು ಕರೆದಾಗ ನಕ್ಕವರು ಹಲವಾರು ಜನ. ಆದರೇ ಈಗ ಈ ಡ್ಯಾಂಗೆ ವೇದಾವತಿ, ತುಂಗಾ, ಭಧ್ರಾ, ಎತ್ತಿನಹೊಳೆ ನೀರು ಬರುತ್ತಿದೆ, ಇನ್ನೂ ಹಲವಾರು ನದಿ ನೀರಿ ಬರಲು ಸಿಂಗಾರಗೊಳ್ಳುತ್ತಿವೆ. ಈ ಎಲ್ಲಾ ನೀರು  ಶಕ್ತಿಪೀಠ ಕ್ಯಾಂಪಸ್‍ಗೂ ಬರುತ್ತಿದೆ. ಇದೊಂದು ಕಾಕತಾಳೀಯ/ಆಕಸ್ಮಿಕವೇ ಸರಿ.

ನೋಡಿ ನನ್ನ ಸಂಶೋಧನೆಯ ಪರಿಕಲ್ಪನೆಗೆ ಪೂರಕವಾಗಿ, ವಾಣಿ ವಿಲಾಸ ಕಾಲುವೆ ಅಕ್ಕ-ಪಕ್ಕ ಸುಮಾರು 750 ಎಕರೆ ನಿಗಮದ ಜಮೀನು ದೊರಕಿದೆ. ಈಗ ಜಮೀನಿನ ಒತ್ತುವಾರಿದಾರರ/ರೈತರ ಸಹಭಾಗಿತ್ವದಲ್ಲಿ ವಿಶೇಷವಾದ ಟೂರಿಸಂ ಯೋಜನೆ ಅನುಷ್ಠಾನ ಮಾಡಲು ಮಾನ್ಯ ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ಸಂಸದರಾದ ಶ್ರೀ ಗೋವಿಂದ ಕಾರಜೋಳರವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸುಧಾಕರ್ ರವರು ಮತ್ತು ವಿಜೆ ಎನ್ ಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಗಿ ಮನವಿ ಸಲ್ಲಿಸಲಾಗಿದೆ.

ಈ ಮನವಿ ಚಿತ್ರದುರ್ಗ ಮುಖ್ಯ ಇಂಜಿನಿಯರ್ ರವರಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕೃಷಿ ಆಶ್ರಮಗಳು, ಈ ಬಗ್ಗೆ ಬೆಳಕು ಚೆಲ್ಲುವ ಕೆಲಸ ಆರಂಭಿಸಲಿವೆ. ರಾಜ್ಯಾದ್ಯಾಂತ ರಚನೆಯಾಗುತ್ತಿರುವ 1008 ಕೃಷಿ ಆಶ್ರಮಗಳು ಈ ಯೋಜನೆಗೆ ಶ್ರಮಿಸಲು ಮುಂದೆ ಬರಲಿವೆ. ಈಗ ಚಿತ್ರದುರ್ಗ ಜಿಲ್ಲೆಯ ಆಸಕ್ತರು ಮುಂದೆ ಬರುವುದು ಸೂಕ್ತವಾಗಿದೆ. ಆಸಕ್ತರಿಗೆ ಬಹಿರಂಗ ಮನವಿ.

ಒಂದು ಅಂತರಾಷ್ಟ್ರೀಯ ಮಟ್ಟದ ಬೃಹತ್ ಕ್ಯಾಂಪಸ್ ಬರದನಾಡಿಗೆ ತರುವಲ್ಲಿ ಸಂಸದರಾದ ಶ್ರೀ ಗೋವಿಂದ ಕಾರಜೋಳರವರ ಪಾತ್ರ ಮಹತ್ತರವಾಗಿದೆ. ನಾನು ಈಗಾಗಲೇ ಅವರೊಂದಿಗೂ ಒಮ್ಮೆ ಸಮಾಲೋಚನೆ ನಡೆಸಿದ್ದೇನೆ. ಈಗ ಚಿತ್ರದುರ್ಗ ಜಿಲ್ಲಾ ದಿಶಾ ಸಮಿತಿಯಲ್ಲಿ ಚರ್ಚೆ ಮಾಡಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಸೂಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸುಧಾಕರ್ ರವರು ಸಂಪೂರ್ಣವಾಗಿ ಸಹಕಾರ ಮಾಡುವುದಾಗಿ  ಅವರ ಕಚೇರಿಯ ಸಿಬ್ಬಂಧಿ ತಿಳಿಸಿದ್ದಾರೆ.