27th June 2025
Share

TUMAKURU:SHAKTHIPEETA FOUNDATION

 ‘ಕೃಷಿ ಆಶ್ರಮ ಫೌಂಡೇಷನ್ ಡೇ’ ಎಂದು ನನಗೆ ನಿಖರವಾದ ಮಾಹಿತಿ ಗೊತ್ತಿಲ್ಲ, ಕೃಷಿ ಆಶ್ರಮದ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರು ಮತ್ತು ಅವರ ತಂಡ ಅಧಿಕೃತವಾಗಿ ಘೋಷಣೆ ಮಾಡಲು ಸಮಾಲೋಚನೆ ನಡೆಸಲಾಗಿದೆ.

 ಈಗ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೃಷಿ ಆಶ್ರಮಗಳ ಸಂಚಾಲಕರನ್ನು ನೇಮಿಸಿದ ನಂತರ, ಒಂದು ದಿನಾಂಕ ನಿಗಧಿ ಪಡಿಸಿ, ವ್ಯವಸ್ಥಿತವಾಗಿ, ಜೀವನದ ಪ್ರತಿ  ದಿನದ ಒಂದು ಘಂಟೆ’  ಸಮಾಜ ಸೇವೆ ಕಾರ್ಯಾರಂಭ ಮಾಡಲು ಕೃಷಿ ಆಶ್ರಮಗಳು ಸಜ್ಜಾಗುತ್ತಿವೆ. ಉಳಿದ 23 ಗಂಟೆಗಳು ಕೃಷಿ ಆಶ್ರಮ ಮತ್ತು ಅವರ ಕುಟುಂಬ ಒಳಿತಿಗಾಗಿ ಶ್ರಮಿಸಲಿವೆ.

‘ನಂಬರ್ ಒನ್ ಕರ್ನಾಟಕ @ 2047’ ಘೋಷಣೆಯಡಿಯಲ್ಲಿ, ಕೃಷಿ ಆಶ್ರಮಗಳು ಆಯಾ ವಿಧಾನಸಭಾ ಕ್ಷೇತ್ರದ, ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2047 ರ ವರೆಗೆ ಏನಾಗಬೇಕು, ಹೇಗೆ ಮಾಡಬೇಕು ಎಂಬ ಬಗ್ಗೆ ಮಾತನಾಡಲಿವೆ. ಈ ಯೋಜನೆ ಜೊತೆಗೆ ಅವರ ವ್ಯಾಪ್ತಿಯ ಪ್ರತಿಯೊಂದು ಗ್ರಾಮ/ ಬಡಾವಣೆಯಲ್ಲಿಯೂ, ರಾಜ್ಯದ 1008 ಕೃಷಿ ಆಶ್ರಮಗಳ ಬಗ್ಗೆಯೂ ಬೆಳಕು ಚಿಲ್ಲಲಿವೆ.

ನಗರ ವಿಧಾನಸಭಾ ಕ್ಷೇತ್ರಗಳಲ್ಲಿ, ನಗರಗಳಲ್ಲಿ ಇದ್ದು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಶ್ರಮ ತೆರಿದಿರುವವರು, ಗೋಶಾಲೆ ನಡೆಸುತ್ತಿರುವವರು, ತಾರಸಿ ತೋಟ, ಸಾವಯವ ಸಂತೆ, ಸಾವಯವ ಮಳಿಗೆ ತೆರೆದಿರುವವನ್ನು ಕೃóಷಿ ಆಶ್ರಮದ ಸಂಚಾಲಕರಾಗಿ ನೇಮಿಸ ಬಹುದಾಗಿದೆ.  ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಅಗತ್ಯವಾಗಿದೆ.

ದಿನಾಂಕ:01.08.2025 ರಂದು ಅಥವಾ ತಮಗೆ ಸೂಕ್ತವೆನಿಸಿದ ದಿವಸ, ಶಕ್ತಿಪೀಠ ಕ್ಯಾಂಪಸ್ ನಲ್ಲಿ, ರಾಜ್ಯದ್ಯಾಂತ ಹೊಣೆಗಾರಿಕೆ ಪಡೆದ ಕೃಷಿ ಆಶ್ರಮಗಳು, ಒಂದೊಂದು ಗಿಡ ನೆಡುವ ಮೂಲಕ, ನೇಚರ್ ಈಸ್ ಗಾಡ್’ ಘೋಷಣೆಯಡಿಯಲ್ಲಿ, ಆ ಗಿಡ ಬೆಳೆದ ಹಾಗೆ ತಮ್ಮ ಕೃಷಿ ಆಶ್ರಮಗಳು ಮತ್ತು ಆಯಾ ವ್ಯಾಪ್ತಿಯ ಅಭಿವೃದ್ಧಿ ಆಗಲಿ ಎಂದು ವಿಶ್ವದ 108 ಶಕ್ತಿಪೀಠಗಳಲ್ಲಿ ನಮಿಸೋಣ.