28th June 2025
Share

TUMAKURU:SHAKTHIPEETA FOUNDATION

ಚಿತ್ರದುರ್ಗ, ಜಿಲ್ಲೆ ಹಿರಿಯೂ ತಾಲ್ಲೋಕಿನಲ್ಲಿ ಆರಂಭವಾಗುತ್ತಿರುವ, ಶಕ್ತಿಪೀಠ ಕ್ಯಾಂಪಸ್ ನಲ್ಲಿ ಪಾರಂಪರಿಕ ವೈದ್ಯ ಶ್ರೀ ಗುರುಸಿದ್ಧರಾದ್ಯ ರವರು ಮತ್ತು ನಿವೃತ್ತ ಅರಣ್ಯ ಅಧಿಕಾರಿ ಶ್ರೀ ಗೋವಿಂದಪ್ಪನವರ ಜೋಡಿ ಸುಮಾರು 400 ಕ್ಕೂ ಹೆಚ್ಚು ಪ್ರಭೇಧಗಳ ಗಿಡ ಹಾಕಿದ್ದಾರೆ, ಜೊತೆಗೆ ಹಲವಾರು ಜನರು ಹಲವಾರು, ತಳಿಗಳ ಗಿಡಕೊಟ್ಟಿದ್ದಾರೆ. ಹಲವಾರು ಜಾತಿ ಗಿಡ ಗುಡ್ ಬೈ ಹೇಳಿವೆ. ಹೆಮ್ಮೆ ಎಂದರೇ ಶೇ 90 ರಷ್ಟು ಗಿಡ ನಗುನಗುತ್ತಾ ಬದುಕಿವೆ.

  ಒಂದು ಸಾವಿರ ಪ್ರಭೇಧಗಳ ಸಂಗ್ರಹ ಮಾಡಲೇ ಬೇಕು ಎಂಬ ಹಠ ನನ್ನದಾಗಿದೆ, ಬೆಂಗಳೂರಿನ ಶ್ರೀ ಜಗನ್ನಾಥ್ ರವರು ಮತ್ತು ಬೀದರ್ ಜಿಲ್ಲೆಯ ಶ್ರೀ ವನಲೋಕ ಸಂತೋಷ್ ರವರು, ಧಾರ್ಮಿಕ ಗಿಡಗಳು ಸೇರಿದಂತೆ, ಯಾವ ಗಿಡ, ಯಾವ ದಿಕ್ಕಿನಲ್ಲಿ ಹಾಕಬೇಕು ಎಂಬ ನಕ್ಷೆ ಹಾಗೂ ಯಾವ ಗಿಡ ಎಲ್ಲಿ ಸಿಗಲಿದೆ ಎಂಬ ಮಾಹಿತಿ ನೀಡುವುದಾಗಿ ಹೇಳುತ್ತಲೇ ಇದ್ದಾರೆ,  ನಾನು ಕಾಯುತ್ತಲೇ ಇದ್ದೇನೆ.

ಮಣ್ಣಿನ ತಜ್ಞರಾದ ಬಳ್ಳಾರಿ ಜಿಲ್ಲೆಯ ಶ್ರೀ ಮಾರುತಿರಾವ್‍ರವರು, ಯಾವುದೇ ಹೊಸ ಮಣ್ಣು ಹಾಕದೇ ಗಿಡಬೆಳಸ ಬೇಕು ಎನ್ನುತ್ತಾರೆ, ಬಹುಷ: ನಮ್ಮ ಕ್ಯಾಂಪಸ್ ಭೂಮಿಯಷ್ಟು ಕಳಪೆ ಮಣ್ಣು ಬೇರೆ ಎಲ್ಲೂ ಇಲ್ಲ ಎನಿಸುತ್ತದೆ, ನಾವು ಗಿಡಬೆಳಸಲು ಹಲವಾರು ರೀತಿಯ ಪ್ರಯತ್ನ ಮಾಡಲಾಗಿದೆ.

ಬಾಗಲಕೋಟೆಯ ಶ್ರೀ ಮಂಜುನಾಥ್ ರವರು, ನಿಮ್ಮ ಭೂಮಿಯನ್ನು 5 ವರ್ಷ ನನಗೆ ಬಿಡಿ, ಯಾವ ಗಿಡ ಬೆಳಸಬೇಕೊ ಅದಕ್ಕೆ ಅಲ್ಲೇ ಸಾವಯವ ಗೊಬ್ಬರ ಮಾಡಿ, ಹಾಕಿ ನಂಬರ್ ಒನ್ ಗಿಡವಾಗಿ ಬೆಳೆಸುತ್ತೇನೆ ಎಂದು ಖಡಖ್ ಆಗಿ ಹೇಳುತ್ತಿದ್ದಾರೆ.

 ಚಿತ್ರದುರ್ಗ ಜಿಲ್ಲೆಯ ಶ್ರೀ ರವಿತೇಜರವರು ಜಗತ್ತಿನಲ್ಲಿರುವ ಎಲ್ಲಾ ಜಾತಿಯ ಬಳ್ಳಿಗಳನ್ನು ಸಂಗ್ರಹ ಮಾಡಿ ಕೊಡುತ್ತೇನೆ ಎಂದವರು, ಕೃಷಿ ಆಶ್ರಮ ವಾಟ್ಸ್‍ಗ್ರೂಪ್ ನಿಂದಲೇ ಕಣ್ಮರೆಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಶ್ರೀ ಜ್ಞಾನೇಶ್ ರವರು ಅವರದೇ ಆದ ಮಾದರಿ ಬೀಜ ಹಾಕಿ ಗಿಡಬೆಳಸುವ ಬಗ್ಗೆ ಹೇಳಿದ್ದಾರೆ, ಗುಂಡಿ ತೆಗೆಸಿ ಹೇಳಿ ಎಂದಿದ್ದಾರೆ. ನನಗೂ ಅವರು ಹೇಳಿದ ಮಾದರಿ ಪ್ರಯೋಗ ಮಾಡುವ ಆಸಕ್ತಿ ಇದೆ.

ನೆಲ ಅಂತಸ್ತಿನಲ್ಲಿ 36 ರಾಜ್ಯಗಳು, ಮೊದಲನೇ ಅಂತಸ್ತಿನಲ್ಲಿ 31 ಜಿಲ್ಲೆಗಳು ಮತ್ತು ಎರಡನೇ ಅಂತಸ್ತಿನಲ್ಲಿ 36 ದೇಶಗಳಿಗೂ ಒಂದೊಂದು ಅಧ್ಯಯನ ಕೇಂದ್ರ ನಿರ್ಮಾಣ ಮಾಡಲು, ಸುಮಾರು 36 ನಿವೇಶನಗಳನ್ನು ಭೂಮಿಯ ಮೇಲೆ ಗುರುತು ಮಾಡಲಾಗಿದೆ. ಅವುಗಳ ಸುತ್ತ ವಿವಿಧ ಪ್ರಭೇಧಗಳ ಕ್ಲಸ್ಟರ್ ಮಾದರಿ ಗಿಡಹಾಕಲು ಯೋಚಿಸಲಾಗಿದೆ.

ಭೂಮಿಯ ಮೇಲೆ ಗುರುತು ಮಾಡಿರು ಭಾರತ ನಕ್ಕೆ ಸುತ್ತಲೂ ಸರ್ವಧರ್ಮಗಳ ಧಾರ್ಮಿಕ ಗಿಡಹಾಕಲು ಶ್ರೀ ಜಗನ್ನಾಥ್ ರಾವ್ ಸಲಹೆ ನೀಡಿದ್ದಾರೆ. ಕೃತಕ ಅರಭ್ಭಿ ಸಮುದ್ರ, ಹಿಂದೂ ಮಹಾಸಾಗರ, ಬಂಗಾಳಕೊಲ್ಲಿಗಳ ವ್ಯಾಪ್ತಿಗೂ ಒಂದೊಂದು ಪ್ರಭೇಧದ ವಿಶೇಷ ಹೂವಿನ ಗಿಡ ಹಾಕುವ ಆಲೋಚನೆ ಇದೆ.

ಶ್ರೀ ಅಮ್ಮನಘಟ್ಟ ಮಹೇಶ್‍ರವರು ಗಿಡಗಳು ಉತ್ತಮವಾಗಿ ಬೆಳೆಯಬೇಕಾದರೆ ಬಸಿಕಾಲುವೆ ಮೆಥೆಡ್ ಮಾಡಲು ಸಲಹೆ ನೀಡಿದ್ದಾರೆ. ನಾನು ಸಹ ಹಲವಾರು ಕೃಷಿ ಆಶ್ರಮಗಳಲ್ಲಿ ನೋಡಿ ಬಂದಿದ್ದೇನೆ. ಈ ಹಿನ್ನಲೆಯಲ್ಲಿ ಬಸಿಕಾಲುವೆಗಳನ್ನು ಇಂದು ದಿನಾಂಕ: 28.06.2025 ರಂದು ಮಾಡಿ ಮುಗಿಸಲಾಗಿದೆ.

 ನಾಳೆಯಿಂದ ಗುಂಡಿಗಳನ್ನು ತೆಗೆಯುತ್ತಾರೆ. ದಿನಾಂಕ: 01.08.2025 ರೊಳಗೆ ಎಷ್ಟು ಸಾದ್ಯವೋ ಅಷ್ಟು ಪ್ರಭೇಧಗಳ ಗಿಡಹಾಕಲೇ ಬೇಕು, ನಂತರ ಅಳಿವಿನಂಚಿಲ್ಲಿನಲ್ಲಿರುವ ಗಿಡಗಳ ಸಂಗ್ರಹ ಮುಂದುವರೆಸಲು ಯೋಚಿಸಲಾಗಿದೆ.

ಗುಂಡಿಗಳು ಮುಗಿದ ತಕ್ಷಣ ಉತ್ತಮ ಗುಣ ಮಟ್ಟದ ಬೀಜ ಗಿಡ, ಬಳ್ಳಿ, ಕಡ್ಡಿ,ಬೇರು, ಸಾವಯವ ಗೊಬ್ಬರ ಸಂಗ್ರಹ ಆರಂಭ ಮಾಡಬೇಕು. ದಯವಿಟ್ಟು ಯಾವ ಕೃಷಿ ಆಶ್ರಮದಲ್ಲಿ ಯಾವ ಪ್ರಭೇದಗಳು ದೊರೆಯುತ್ತಿವೆ, ದರ ಎಷ್ಟು, ಯಾವ ಮಾದರಿ ಸಾವಯವ ಗೊಬ್ಬರ ದೊರೆಯುತ್ತದೆ, ದರ ಎಷ್ಟು ಎಂಬ ಮಾಹಿತಿ ಹಂಚಿಕೊಳ್ಳುವಿರಾ.

ದೂರದ ಕೃಷಿ ಆಶ್ರಮಗಳಿಂದ ಸಾರಿಗೆ ವ್ಯವಸ್ಥೆಯೂ ಕಷ್ಟವೆನಿಸುತ್ತಿದೆ. ಆದರೂ ಮಹರಾಷ್ಟ್ರದ ನಾಗಪುರ್ ದಿಂದ ಗಿಡ ಕಳುಹಿಸುತ್ತೇನೆ ಎನ್ನುತ್ತಾರೆ  ಶ್ರೀ ಅಂಬರೀಷ್ ರವರು.ಶ್ರೀ ಪ್ರದೀಫ್ ರವರು 500 ಜಾತೀಯ ಗಿಡಗಳನ್ನು ಕೊಡಿಸುವುದಾಗಿ ಹೇಳಿದ್ದಾರೆ, ಗುಂಡಿ ತೆಗೆದ ನಂತರ ಚರ್ಚಿಸೋಣ ಎಂದು ಹೇಳಿದ್ದೇನೆ.

ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೊಣೆಗಾರಿಕೆ ಪಡೆಯುತ್ತಿರುವ ಕೃಷಿ ಆಶ್ರಮ ಪ್ರತಿನಿಧಿಗಳು, ದಿನಾಂಕ: 01.08.2025 ಶಕ್ತಿಪೀಠ ಕ್ಯಾಂಪಸ್‍ಗೆ ಆಗಮಿಸಿ  ಒಂದೊಂದು ಗಿಡವನ್ನು ಹಾಕಲು ಹೃದಯಪೂರ್ವಕ ಮನವಿ ಮಾಡಲಾಗಿದೆ.

ಆರಂಭದಲ್ಲಿ ಪಾರಂಪರಿಕ ವೈದ್ಯ ಶ್ರೀ ಗುರುಸಿದ್ಧರಾದ್ಯರವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ 108 ಜನ ನಾಟಿ ವೈಧ್ಯರು ಬಂದು ಹಾಕಿದ್ದರು.