TUMAKURU:SHAKTHIPEETA FOUNDATION
ಶಕ್ತಿಪೀಠ ಕ್ಯಾಂಪಸ್ ನಲ್ಲಿ ಭಾರತ ನಕ್ಷೆಯನ್ನು ಭೂಮಿಯ ಮೇಲೆ ನಿರ್ಮಾಣ ಮಾಡಿ, ಕೇಂದ್ರ ಸರ್ಕಾರ ಅಧ್ಯಯನ ಮಾಡುತ್ತಿರುವ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆಯನ್ನು ನಿರ್ಮಾಣ ಮಾಡುವ ಹಿನ್ನಲೆಯಲ್ಲಿ ದಿನಾಂಕ:22.11.2021 ರಂದು ಶಕ್ತಿಪೀಠ ಕ್ಯಾಂಪಸ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
![](https://epaper.shakthipeeta.in/wp-content/uploads/2021/11/IMG-20211122-WA0023-1024x768.jpg)
ತಂಡದಲ್ಲಿ ಇಇ ಶ್ರೀ ರಾಜೇಶ್ವರ ರಾವ್ರವರು, ಎಇ ಶ್ರೀ ಕೃಷ್ಣಮೂರ್ತಿಯವರು ಮತ್ತು ಶ್ರೀ ಶಿವಣ್ಣ ಕಲಡಗಿರವರು ಇದ್ದರು. ಶ್ರೀ ಸತ್ಯಾನಂದ್ ಯೋಜನೆಯ ಬಗ್ಗೆ ವಿವರಿಸಿದರು.
ದಿನಾಂಕ:22.09.2021 ರಂದು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಕಟ್ಟಡದ ಶಂಕುಸ್ಥಾಪನೆಯನ್ನು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ನೇತೃತ್ವದಲ್ಲಿ ಮಾಡಲಾಗಿತ್ತು. ಇಂದಿಗೆ ಮೂರು ತಿಂಗಳಾಯಿತು, ನಿರಂತರ ಮಳೆಯಿಂದಾಗಿ ಕಟ್ಟಡದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.
![](https://epaper.shakthipeeta.in/wp-content/uploads/2021/11/20211122_134457-1024x577.jpg)
ನದಿ ಜೋಡಣೆಯ ಪ್ರತಿ ಸಭೆಯನ್ನು ಒಂದೊಂದು ರಾಜ್ಯದಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿದೆ. ಈ ಕಟ್ಟಡ ಪೂರ್ಣಗೊಂಡಲ್ಲಿ ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆ ವೀಕ್ಷಣೆ ಮತ್ತು ಸಭೆ ಎರಡನ್ನು ಮಾಡಬಹುದಾಗಿದೆ ಎಂಬ ಆಶಯ ನಮ್ಮದಾಗಿದೆ.
![](https://epaper.shakthipeeta.in/wp-content/uploads/2021/11/20211122_160359-1024x577.jpg)