27th July 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರು ಒಬ್ಬ  ಸೌಮ್ಯವಾದಿ ಎಂಬ ಪಟ್ಟವಿದೆ.

ಕೇಂದ್ರ ಸರ್ಕಾರದ  ಆನ್ ಲೈನ್ ಸಭೆಯಲ್ಲಿ ಅಂತರ್ ರಾಜ್ಯ ಜಲವಿವಾದದ ಬಗ್ಗೆ ಸಭೆ ನಡೆಯುವಾಗ, ಒಂದು ರಾಜ್ಯದ ಪ್ರತಿನಿಧಿಯೊಬ್ಬರು ಆಡಿದ ಮಾತಿಗೆ ಕೆರಳಿದ ರಾಕೇಶ್ ಸಿಂಗ್ ರವರು ಸಮಯಕ್ಕೆ ತಕ್ಕಂತೆ ಬಳಸಿದ ಪದಗಳು, ಹೇಳಿದ ರೀತಿ ನಿಜಕ್ಕೂ ಯಾವೋಬ್ಬ ಅತ್ಯಂತ ಎತ್ತರದ ಸ್ಥಾನದಲ್ಲಿರುವ ವಕೀಲರನ್ನೆ ಮೀರಿಸುವಂತೆ ಇತ್ತು ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರೂ ವರ್ಣಿಸುತ್ತಿದ್ದ ರೀತಿಯೇ ಒಂದು ಹೆಮ್ಮೆ.

ಇದೂವರೆಗೂ ರಾಕೇಶ್ ಸಿಂಗ್ ರವರು ಈ ರೀತಿ ಮಾತನಾಡಿದ್ದನ್ನು ಅವರ ಇಲಾಖೆಯವರು ಯಾರೂ ನೋಡಿಯೇ ಇರಲಿಲ್ಲವಂತೆ.ನಿವೃತ್ತರಾದ ಮೇಲೆ ಇವರೇ ನ್ಯಾಯಾಲದಲ್ಲಿ ರಾಜ್ಯದ ಪರ ವಾದಿಸಬಹುದಲ್ಲವೇ?

ಸಭೆಯ ಮಾಹಿತಿ, ಆಡಿದ ಮಾತುಗಳು ಮತ್ತು ಹೇಳಿದ ವ್ಯಕ್ತಿ ಎಲ್ಲವನ್ನೂ ಬಹಿರಂಗಮಾಡಬಾರದು ಎಂಬ ದೃಷ್ಠಿಯಿಂದ ಮಾಹಿತಿ ನೀಡಿಲ್ಲ. ನಾನು ನನಗೆ ಹೇಳಿದ ಎಲ್ಲವನ್ನೂ ಹಾಗೆಯೇ ಬರೆದರೆ ನಾಳೇ ಮಾಹಿತಿ ನೀಡುವವರೇ ಇಲ್ಲದಂತಾಗುತ್ತಾರೆ. ‘ರಹಸ್ಯ ಒಂದು ವಿಶೇಷತೆ.