27th July 2024
Share

TUMAKURU:SHAKTHIPEETA FOUNDATION

ಆಯವ್ಯಯದಲ್ಲಿ ಮಂಡನೆ ಮಾಡಿದ ನಂತರ, ದಕ್ಷಿಣ ಬಾರತದ ನದಿ ಜೋಡಣೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯ ದಿನಾಂಕ:18.02.2022 ರಂದು ದೆಹಲಿಯಲ್ಲಿ ಮೊದಲ ಸಭೆ ನಡೆಸಿರುವುದು ಮೆಚ್ಚ ಬೇಕಾದ ವಿಷಯ.

‘ದೆಹಲಿಯ ಉನ್ನತ ಮೂಲದ ಮಾಹಿತಿ ಪ್ರಕಾರ ನಮ್ಮ ರಾಜ್ಯದ ಪ್ರತಿನಿಧಿಗಳು ಒಳ್ಳೆಯ ಚರ್ಚೆ ಮಾಡಿದ್ದಾರೆ. ಸಭೆ ನಡವಳಿಕೆ ಓದದೆ, ಈ ಸಭೆಯಲ್ಲಿ ನಡೆದ ಚರ್ಚೆ ವಿಚಾರ ಮಾತನಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ನನ್ನದಾಗಿದೆ.

ನಾನು ಹಲವಾರು ಪರಿಣಿತ ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದೇನೆ. ಈ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದೇನೆ.

  1. ಭಾರತದ ಹಾಗೂ ವಿಶ್ವದ ವಿವಿಧ ದೇಶಗಳಲ್ಲಿ, ಇದೂವರೆಗೂ ವಿವಾದಗಳ ಬೇಸಿನ್‍ನಲ್ಲಿನ ನದಿ ನೀರಿನ ಹಂಚಿಕೆ ಸೂತ್ರಗಳ ಮಾದರಿ ಯೋಜನೆ ಪಟ್ಟಿ.
  2. ಕೇಂದ್ರ ಸರ್ಕಾರ ಈಗ ಗುರುತಿಸಿರುವ ಕಡೆಯೇ ಏಕೆ ವಾಟರ್ ಟ್ಯಾಪ್ ಮಾಡಬೇಕು. ಇನ್ನೂ ಮೇಲ್ಬಾಗದಲ್ಲಿ ಮಾಡಲು ಅವಕಾಶ ಇಲ್ಲವೇ? ಸಮಗ್ರ ಅಧ್ಯಯನ ಮಾಡಬೇಕು.
  3. ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಕಾರಿಡಾರ್ ಯೋಜನೆ ರೂಪಿಸಿ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ಜನ ಸಂಖ್ಯೆವಾರು ನದಿ ನೀರು ಹಂಚಿಕೆ ಮಾಡಲಿ. ಹಾಲಿ ಕುಡಿಯುವ ನೀರಿಗಾಗಿ ಇರುವ ಅಲೋಕೇಷನ್ ನೀರನ್ನು ಆಯಾ ರಾಜ್ಯಗಳ ಬೇಡಿಕೆಯಂತೆ ಬದಲಾಯಿಸಿಕೊಳ್ಳಲಿ. ಕುಡಿಯುವ ನೀರಿನ ಯೋಜನೆಗೆ 4-5 ಪಟ್ಟು ಸಾಮರ್ಥ್ಯದ ಡ್ಯಾಂ ಕಟ್ಟಿ ನೀರು ನಿಲ್ಲಿಸ ಬಹುದು. ಪ್ರವಾಹದ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳು ನೀರು ಸಂಗ್ರಹಿಸಿ ಇಟ್ಟುಕೊಳ್ಳ ಬಹುದು. ಬರಗಾಲದಲ್ಲಿ ಬಳಸಿಕೊಳ್ಳಬಹುದು. ಇದರ ಲೆಕ್ಕಾಚಾರ ಆರಂಭವಾಗಿದೆ.
  4. ಕೃಷ್ಣಾ ಮತ್ತು ಕಾವೇರಿ ನ್ಯಾಯಾಧೀಕರಣದಲ್ಲಿ ಯಾವ ರಾಜ್ಯ ನದಿ ನೀರಿನ ಯೋಜನೆಯಿಂದ ಹೆಚ್ಚಿಗೆ ವಂಚಿತವಾಗಿದೆ ಎಂಬ ಬಗ್ಗೆ ಉಲ್ಲೇಖವಾಗಿದೆಯಂತೆ. ಆ ವರದಿ ನಮ್ಮ ರಾಜ್ಯಕ್ಕೆ ವರದಾನವಾಗಲಿದೆಯಂತೆ, ಈ ಬಗ್ಗೆ ಹೆಚ್ಚು ಚರ್ಚೆ ಮತ್ತು ಅಧ್ಯಯನ ಅಗತ್ಯ.
  5. ಯೋಜನೆ ವ್ಯಾಪ್ತಿಯ ನೀರಾವರಿ ಯೋಜನೆಗಳು ಮತ್ತು ಶೇಕಡವಾರು ಅನೂಕೂಲದ ಮಾಹಿತಿ ಸಂಗ್ರಹಿಸಿ, ಬೇಡಿಕೆ ಆಧಾರದ ಮೇಲೆ, ಶೇಕಡವಾರು ಹಂಚಿಕೆ ಮಾಡಿದರೆ ಹೇಗೆ ಎಂಬ ಬಗ್ಗೆ ಅಧ್ಯಯನ ಮಾಡಬೇಕಲ್ಲವೇ?

ಈ ಐದು ವಿಚಾರಗಳ ಬಗ್ಗೆ ಆಸಕ್ತಿ ಇದ್ದವರು ಮಾಹಿತಿ ನೀಡಲು ಮನವಿ. ಇನ್ನೂ ಯಾವುದಾದರೂ ಐಡಿಯಾ ಇದ್ದಲ್ಲಿ ತಿಳಿಸಿ.

ನಮ್ಮ ರಾಜ್ಯ ಸರ್ಕಾರ ಮತ್ತು ಸರ್ವಪಕ್ಷಗಳು ಈ ಬಗ್ಗೆ ಅಭಿಪ್ರಾಯ ಮಂಡಿಸಲಿ. ವಿರೋಧ ಮಾಡುವುದರ ಬದಲು ಪರ್ಯಾಯ ಸಲಹೆಗಳು ಉತ್ತಮ ಅಲ್ಲವೇ?

ನಮ್ಮ ರಾಜ್ಯದಲ್ಲಿನ ಪರಿಣಿತರ ಸಲಹೆ ಕೇಳುವವರು ಯಾರು? ಎಲ್ಲರೂ ಸರ್ವಜ್ಞರೇ?

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿ ಸದಸ್ಯರಾಗಿರುವುದರಿಂದ, ಈ ಎಲ್ಲಾ ಪರ್ಯಾಯ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.