27th July 2024
Share

TUMAKURU:SHAKTHIPEETA FOUNDATION

ಪ್ರಧಾನಿಯವರು ಮತ್ತು ಮುಖ್ಯ ಮಂತ್ರಿಯವರಿಗೆ ಪತ್ರ ಬರೆಯುವ ಮೊದಲು ತಮ್ಮ ಸಲಹೆಗಳಿಗಾಗಿ ಬಹಿರಂಗ ಮನವಿ.

  1. ಪ್ರಧಾನಿ ಶ್ರೀ ನರೇಂದ್ರಮೋದಿಯವರ ಸರ್ಕಾರ ಮನೆ.ಮನೆಗೆ ಕುಡಿಯುವ ನೀರಿನ ನಲ್ಲಿ ಹಾಕಿ 2024 ರೊಳಗೆ ಶಾಶ್ವತವಾದ ನೀರು ಕೊಡಬೇಕೆಂಬ ದೃಢ ನಿರ್ಧಾರ ಮಾಡಿ ‘ಜಲಜೀವನ್ ಮಿಷನ್ ಯೋಜನೆ’ ಘೋಷಣೆ ಮಾಡಿದೆ.
  2. ಈಗ ಹಾಲಿ ಇರುವ ಪ್ರಕಾರ ಯೋಜನೆ ರೂಪಿಸಿದರೆ, ‘ದಾಖಲೆಯಲ್ಲಿ ಶೇ 100 ರಷ್ಟು ಪ್ರಗತಿ’ ತೋರಿಸಿ, ಬಹಳಷ್ಟು ಪ್ರದೇಶದಲ್ಲಿ ‘ನಲ್ಲಿಯಲ್ಲಿ ಮಾತ್ರ ನೀರು ಬರುವುದು ಕಷ್ಟ ‘
  3. ದಕ್ಷಿಣ ಭಾರತದ ನದಿ ಜೋಡಣೆ’ ಮಾಡುವುದಾಗಿ ಕೇಂದ್ರ ಸರ್ಕಾರ 2022-2023 ರಲ್ಲಿ ಘೋಷಣೆ ಮಾಡಿದೆ.
  4. ನದಿ ಜೋಡಣೆ ನೀರಿನ ಹಂಚಿಕೆ ಸೂತ್ರ’ ಮಾಡುವ ಬಗ್ಗೆ ಚರ್ಚೆ ಆರಂಭವಾಗಿದೆ.
  5. ಮೊದಲು ಈ ನದಿ ಜೋಡಣೆ ವ್ಯಾಪ್ತಿಗೆ ಬರುವ ‘ರಾಜ್ಯಗಳ ಅಂತಿಮ ಪಟ್ಟಿ’ ಪ್ರಕಟಿಸಬೇಕು.
  6. ನಮ್ಮ ಗಮನಕ್ಕೆ ಬಂದ ಹಾಗೆ ಈ ಪಟ್ಟಿಯಲ್ಲಿರುವಂತೆ ‘ಎಂಟು ರಾಜ್ಯಗಳು’ ಈ ವ್ಯಾಪ್ತಿಗೆ ಬರಬಹುದು.
  7. ಪಟ್ಟಿಯಲ್ಲಿರುವಂತೆ ಆಯಾ ರಾಜ್ಯಗಳ ‘ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ಲೆಕ್ಕ’ ಹಾಕಲಾಗಿದೆ.
  8. ಈ ನದಿ ಜೋಡಣೆಯನ್ನು ‘ಜಲಜೀವನ್ ಮಿಷನ್ ಕಾರಿಡಾರ್’ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು.
  9. ಆಯಾ ರಾಜ್ಯಗಳು ಈಗಾಗಲೇ ಕುಡಿಯುವ ನೀರಿಗೆ ಮಾಡಿಕೊಂಡಿರುವ ‘ನದಿ ನೀರಿನ ಅಲೋಕೇಷನ್ ಬಗ್ಗೆ ತಲೆಕೆಡಿಸಿಕೊಳ್ಳಬಾರದು’. ಕೈಗಾರಿಕಾ ಪ್ರದೇಶಗಳಿಗೆ ಮತ್ತು ಲೈವ್ ಸ್ಟಾಕ್ ಗಳಿಗೆ ಆ ನೀರು ಬಳಸಬಹುದಾಗಿದೆ.
  10. ಉದಾಹರಣೆಗೆ ಕರ್ನಾಟಕ ರಾಜ್ಯಕ್ಕೆ 2050 ರವರೆಗೆ ಅಗತ್ಯವಿರುವ ಕುಡಿಯುವ ನೀರು ಸುಮಾರು 107.80 ಟಿ.ಎಂ.ಸಿ.ಅಡಿ ನೀರು. ಈ ನೀರಿನ 5 ಪಟ್ಟು ಸಾಮಾಥ್ರ್ಯದ ವಾಟರ್ ಬ್ಯಾಂಕ್ ನಿರ್ಮಾಣ ಅಂದರೆ, ಸುಮಾರು ‘539 ಟಿ.ಎಂ.ಸಿ.ಅಡಿ ನೀರಿನ ಸಾಮಾಥ್ರ್ಯದ ವಾಟರ್ ಬ್ಯಾಂಕ್’ ಗಳನ್ನು ರಾಜ್ಯದ 31 ಜಿಲ್ಲೆಗಳಲ್ಲಿ ಎಲ್ಲಿ ಬೇಕಾದರೂ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡುವುದು. ಇದು ಎಲ್ಲಾ ರಾಜ್ಯಕ್ಕೂ ಅನ್ವಯವಾಗಲಿದೆ. 
  11. ಜಲಜೀವನ್ ಮಿಷನ್ ಗ್ರಾಮೀಣ ಪ್ರದೇಶದ ಯೋಜನೆಯಾದರೂ ಇಲ್ಲಿ ‘ನಗರ ಮತ್ತು ಗ್ರಾಮೀಣ ಪ್ರದೇಶಗಳ ನೀರಿನ ಲೆಕ್ಕ’ಹಾಕಲಾಗಿದೆ.
  12. ಮೊದಲನೆ ಹಂತದ ನದಿ ಜೋಡಣೆ’ ಯೋಜನೆಯಲ್ಲಿ ಜನಸಂಖ್ಯೆವಾರು ಪಟ್ಟಿಯಲ್ಲಿರುವಂತೆ ನೀರಿನ ಹಂಚಿಕೆ ಮಾಡುವುದು.
  13. ನಂತರ ಎರಡನೇ ಹಂತದ ನದಿ ಜೋಡಣೆ’ ಯೋಜನೆಯಲ್ಲಿ ಉಳಿದ ನೀರಿನ ಯೋಜನೆ ರೂಪಿಸುವುದು.
  14. ಆಯಾ ರಾಜ್ಯಗಳು ‘ಪ್ರವಾಹದ ಸಂದರ್ಭದಲ್ಲಿ ಈ ಡ್ಯಾಂಗಳಿಗೆ, ಯಾವುದೇ ನದಿ ಪಾತ್ರದ ನೀರು ತುಂಬಿಸಿಕೊಳ್ಳಲು ’ ಕೇಂದ್ರ ಸರ್ಕಾರ ಅನುಮತಿ ನೀಡುವುದು.
  15. ಜಲಜೀವನ್ ಮಿಷನ್ ಕಾರಿಡಾರ್ ವಿಶೇಷ ಯೋಜನೆ ಎಂದು ಪರಿಗಣಿಸಿ. ಅಗತ್ಯವಿರುವ ರಾಜ್ಯಗಳ ಪಾಲಿನ ಅನುದಾನವನ್ನು ‘ಕೇಂದ್ರ ಸರ್ಕಾರ ಬಡ್ಡಿ ರಹಿತ ಸಾಲ’ವಾಗಿ ನೀಡಬಹುದಾಗಿದೆ.
  16. ಈ ಯೋಜನೆಯನ್ನು ‘ಪಿಪಿಪಿ ಯೋಜನೆಯಡಿ ಮಾಡಲು ಸಾಧಕ-ಬಾಧಕ’ಗಳ ಬಗ್ಗೆಯೂ ಪರಿಶೀಲನೆ ಮಾಡಬೇಕಾಗುವುದು.
  17. ಜಲಜೀವನ್ ಮಿಷನ್ ಯೋಜನೆಯೂ ‘ಯಶಸ್ವಿಯಾಗಿ’ ಆಗಲಿದೆ, ನದಿ ಜೋಡಣೆಯ ನೀರಿನ ಹಂಚಿಕೆಯೂ ಸುಸೂತ್ರವಾಗಿ ‘ಬಗೆಹರಿಯಲಿದೆ.’
  18. ರಾಜ್ಯಗಳ ಜನಸಂಖ್ಯೆ ವಿಚಾರ ‘ದೇವರಿಗೆ ಬಿಟ್ಟು ಬಿಡಬೇಕು’. ಹುಟ್ಟಿಸಿದ ದೇವರೇ ಈ ನೀರಿನ ಹಂಚಿಕೆ ಮಾಡಿದ್ದಾನೆಂದು ತಿಳಿದುಕೊಳ್ಳ ಬೇಕು.
  19. ನಂತರದ ನದಿ ಜೋಡಣೆ ನೀರನ್ನು ‘ಕೃಷಿಗಾಗಿ’ ಬಳಸಲು ಚಿಂತನೆ ನಡೆಸಬೇಕು.
  20. ಈಗ ಈ ರೀತಿ ಆರಂಭ ಮಾಡಿದರೆ 100 ನೇ ಸ್ವಾತಂತ್ರ್ಯ ದಿನದ ವೇಳೆಗೆ ಈ ರಾಜ್ಯಗಳ ಜನತೆ ‘ಕಡೇ ಪಕ್ಷ ಕುಡಿಯುವ ನೀರಿನ ಬವಣೆಯಿಂದ ಪಾರಾಗಲಿದ್ದಾರೆ.’
  21. ಇಲ್ಲದೇ ಇದ್ದಲ್ಲಿ ನದಿ ಜೋಡಣೆ ಮತ್ತು ಜಲಜೀವನ್ ಮಿಷನ್ ಎರಡು ಯೋಜನೆಗಳು ‘ಕಡತದಲ್ಲಿ, ಮಾಧ್ಯಮಗಳಲ್ಲಿ ಮತ್ತು ಬಾಷಣಗಳಲ್ಲಿ ಮಾತ್ರ ಯಶಸ್ವಿಯಾಗಲಿವೆ.’

ಶಕ್ತಿಪೀಠ ಫೌಂಡೇಷನ್ ಮನವಿಗೆ ಸ್ಪಂಧಿಸಿ, ಈ ಪಟ್ಟಿ ಮಾಡಿ ನೀಡಿದ ಪರಿಣಿತ ತಜ್ಞರಿಗೆ ಧನ್ಯವಾದ. ಈ ಪಟ್ಟಿಯಲ್ಲಿನ ಡಾಟಾ ಬಗ್ಗೆಯೂ ಪರಿಶೀಲನೆ ಮಾಡಲು ಮನವಿ.