18th April 2024
Share

TUMAKURU:SHAKTHIPEETA FOUNDATION

ಮುಂದಿನ ‘ವಿಶ್ವ ಪರಿಸರ ದಿವಸದ ಕಾಲಮಿತಿ ನಿಗಧಿ ಗೊಳಿಸಿ,’ ಈ ಕೆಳಕಂಡವರಿಗೆ ಹೊಣೆಗಾರಿಕೆ ನೀಡಲು ಪಾಲಿಕೆ ಆಯುಕ್ತರಾದ ಶ್ರೀ ಮತಿ ರೇಣುಕರವರೊಂದಿಗೆ ದಿನಾಂಕ:19.03.2022 ರಂದು ಸಂಜೆ 5 ಗಂಟೆಗೆ ಸಮಾಲೋಚನೆ ನಡೆಸಲಾಯಿತು.ಜೊತೆಯಲ್ಲಿ ದಿಶಾ ಸಮಿತಿ ಸದಸ್ಯರಾದ ಶ್ರೀ T.R.ರಘೋತ್ತಮ್ ರಾವ್ ರವರು ಇದ್ದರು ಸೋಮವಾರ ಈ ಹೊಣೆಗಾರಿಕೆ ಬಗ್ಗೆ ಕಚೇರಿ ಆದೇಶ ನೀಡುವ ಮೂಲಕ ಚಾಲನೆ ನೀಡುವ ಭರವಸೆಯನ್ನು ಆಯುಕ್ತರು ನೀಡಿದ್ದಾರೆ.

  1. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ  ಪ್ರತಿಯೊಂದು ಗ್ರಾಮಗಳ ಸರ್ವೆ ನಂಬರ್ ಗಳ ಪಟ್ಟಿ- ನಗರ ಪಾಲಿಕೆ ಸರ್ವೆಯರ್ಸ್.
  2. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ  ಪ್ರತಿಯೊಂದು ಗ್ರಾಮಗಳ ಸರ್ವೆ ನಂಬರ್ ಗಳ ವಾರು ಲೇ-ಔಟ್ ಪಟ್ಟಿ – ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ
  3. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ  ಪ್ರತಿಯೊಂದು ಗ್ರಾಮಗಳ ಸರ್ವೆ ನಂಬರ್‍ಗಳವಾರು ಲೇ-ಔಟ್‍ವಾರು ಉಧ್ಯಾನವನಗಳ ಪಟ್ಟಿ – ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ
  4. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ  ಅಭಿವೃದ್ಧಿ ಆಗದೇ ಇರುವ ಪ್ರತಿಯೊಂದು  ಉಧ್ಯಾನವನಗಳಿಗೆ ಮುಳ್ಳುತಂತಿ ಮತ್ತು ನಾಮಫಲಕ ಹಾಕಲು ಅಂದಾಜು ಪಟ್ಟಿ- ನಗರ ಪಾಲಿಕೆ ವಾರ್ಡ್‍ವಾರು ಇಂಜಿನಿಯರ್.
  5. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ  ಅಭಿವೃದ್ಧಿ ಆಗದೇ ಇರುವ ಪ್ರತಿಯೊಂದು  ಉಧ್ಯಾನವನಗಳಿಗೆ ಗಿಡಗಳನ್ನು ಹಾಕಿ ಮೂರು ವರ್ಷ ನಿರ್ವಹಣೆ ಮಾಡಲು ತಗಲುವ ಅಂದಾಜು ಪಟ್ಟಿ- ಆಯುಷ್ ಇಲಾಖೆ, ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆ.
  6. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು  ಉಧ್ಯಾನವನಗಳ ಶುಚಿತ್ವ – ಪಾಲಿಕೆ ಆರೋಗ್ಯ ವಿಭಾಗ
  7. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು  ವಾರ್ಡ್‍ವಾರು ಉಧ್ಯಾನವನಗಳ ಅಂತಿಮ ಪಟ್ಟಿಗೆ ಆಯಾ ವಾರ್ಡ್ ಕಾರ್ಪೋರೇಟರ್ ಮತ್ತು ಮೇಯರ್ ಅನುಮೋದನೆ.
  8. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ  ಪ್ರತಿಯೊಂದು ಉಧ್ಯಾನವನಗಳ ಜಿಐಎಸ್ ಲೇಯರ್- ನಗರ ಪಾಲಿಕೆ ಜಿಐಎಸ್/ಡಾಟಾ ವಿಂಗ್.
  9. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ  ಪ್ರತಿಯೊಂದು ಉಧ್ಯಾನವನಗಳ ಜಿಐಎಸ್ ಲೇಯರ್ ಅಧಿಕೃತ ಘೋಷಣೆ ಸಾರ್ವಜನಿರ ಆಕ್ಷೇಪಣೆಗೆ ಆಹ್ವಾನ- ಆಯುಕ್ತರು ಪಾಲಿಕೆ.

  ಇಷ್ಠು ಮಾಡಿದರೆ ಕಳೆದ 21 ವರ್ಷಗಳಿಂದ ನಡೆದು ಬಂದು ಹೋರಾಟದ ಅಂತಿಮ ರೂಪು ದೊರೆಯಲಿದೆ. ಶ್ರಮಿಸಿದ ಎಲ್ಲರಿಗೂ ನಾಗರೀಕ ಸನ್ಮಾನದ ಜೊತೆಗೆ ಪ್ರತಿಯೊಂದು ಉಧ್ಯಾನವನದ ಮೌಲ್ಯಮಾಪನಕ್ಕೆ  ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಪಾಲಿಕೆ ಪತ್ರ ಬರೆಯುವುದು.

‘ಒಂದು ವೇಳೆ ಬಾರಿಯೂ ವಿಫಲವಾದರೆ, ವಿಶ್ವ ಪರಿಸರ ದಿವಸದಿಂದ ಧರಣೆ ಕೂರುವುದಾಗಿಯೂ ತಿಳಿಸಿದ್ದೇನೆ’.