TUMAKURU:SHAKTHIPEETA FOUNDATION
ಮಾಜಿ ಸಚಿವರಾದ ದಿ. ವೈ.ಕೆ.ರಾಮಯ್ಯನವರು ಒಂದು ವೇಳೆ ಪುನರ್ ಜನ್ಮ ಪಡೆದರೆ, ಕುಣಿಗಲ್ ಹೇಮಾವತಿ ಕಾಲುವೆಯ ವಿಳಂಭ ನೋಡಿ, ಅವರು ನಿಧನರಾದ ದಿನದಿಂದ ಇಲ್ಲಿಯವರೆಗೂ ಅಡಳಿತ ನಡೆಸಿರುವ ಶಾಸಕರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಏನು ಮಾಡುತ್ತಾರೆ —- ಎಂಬುದನ್ನು ಜನರೇ ಊಹಿಸಿಕೊಳ್ಳಿ, ನಾನು ಹೇಳಿದರೆ ಅದರ ಮೇಲೆ ಒಂದು ಕೇಸ್ ಹಾಕುತ್ತಾರೆ.

ತುಮಕೂರು ಹೇಮಾವತಿ ಕಾಲುವೆ ಮೂಲ ಯೋಜನೆಯಲ್ಲಿ 240 ಕೀಮೀ ಇತ್ತಂತೆ, ಈಗ 228 ಕೀಮೀ ವರೆಗೆ ಮಾತ್ರ ಮಾಡುತ್ತಿದ್ದಾರಂತೆ, ಇಲ್ಲಿಯವರೆಗೂ 165 ನೇ ಕೀಮೀ ಮಾಡೆಲಿಂಗ್ ಆಗಿದೆ, 192 ಕೀಮೀ ವರೆಗೆ ಮಾತ್ರ ಕಾಲುವೆ ಅಪೂರ್ಣ ಕಾಲುವೆ ಆಗಿದೆಯಂತೆ, ಇನ್ನೂ ಉಳಿದ 36 ಕೀಮಿ ಹೇಮಾವತಿ ಕಾಲುವೆ, ಮಾಜಿ ಸಚಿವರಾದ ದಿ. ವೈ.ಕೆ.ರಾಮಯ್ಯನವರ ಪುನರ್ಜನ್ಮ ಪಡೆದು ಬರುತ್ತಾರೆ ಎಂದು ಕಾಯುತ್ತಿರಬಹುದು.
165 ನೇ ಕೀಮಿ ನಿಂದ ಮುಂದೆ 500 ಕ್ಯುಸೆಕ್ಸ್ ಸಾಮಾಥ್ರ್ಯದ ಕಾಲುವೆಯೇ ಪೂರ್ಣವಾಗಿ ನಿರ್ಮಾಣವಾಗಿಲ್ಲ, ಎಂದರೆ ನೀರು ಎಲ್ಲಿಗೆ ಹರಿಯಬೇಕು. ನಾಚಿಕೆಯಾಗುವುದಿಲ್ಲವೇ ಈ ರಾಜಕಾರಣಿಗಳಿಗೆ. ಅಧಿಕಾರಿಗಳಿಗೆ, ಜೊತೆಗೆ ರಾಮಯ್ಯನವರು ಬದುಕಿದ್ದಾಗ, ಅವರ ಹಿಂದೆ ಇದ್ದರಲ್ಲ, ಅವರ ಶಿಷ್ಯರಾದರೂ ಹೋರಾಟ ರೂಪಿಸಬಹುದಿತ್ತಲ್ಲವೇ?
ನೋಡಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ನಿಧನರಾಗಿ ಎಷ್ಟು ವರ್ಷವಾಗಿದೆ. ನಾವು ಅವರ ಪರಿಕಲ್ಪನೆ ಬಗ್ಗೆ ಹೋರಾಡುತ್ತಿಲ್ಲವೇ ? ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ..ಎಸ್.ಬಸವರಾಜ್ ರವರು ರಾಜಕೀಯ ನಿವೃತ್ತಿ ಪಡೆದರೂ, ನಾವು ಹೋರಾಟ ಮಾಡುತ್ತಿಲ್ಲವೇ ?