TUMAKURU:SHAKTHIPEETA FOUNDATION
ಮಾನ್ಯ ಉಪಮುಖ್ಯಮಂತ್ರಿಯವರು ಹಾಗೂ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಸಲಹೆ ಮೇರೆಗೆ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು, ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ರಚಿಸಿರುವ ‘ರಾಜ್ಯದಲ್ಲಿನ ಒಣ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ತರಲು ಯೋಜನೆಗಳನ್ನು ರೂಪಿಸಲು ತಾಂತ್ರಿಕ ತಜ್ಞರನ್ನೊಳಗೊಂಡ ಸಮಿತಿ’ ನಿಜಕ್ಕೂ ಐತಿಹಾಸಿಕ ನಿರ್ಧಾರವಾಗಿದೆ, ಡಿಕೆಶಿ ಕೈಗೊಂಡಿರುವ ಕ್ರಮಕ್ಕೆ ಹೃದಯಪೂರ್ವಕವಾಗಿ ಸ್ವಾಗತ.
ರಾಜ್ಯದ 31 ಜಿಲ್ಲೆಗಳವಾರು ಹಾಲಿ ಇರುವ ನೀರಾವರಿ ಯೋಜನೆಗಳು, ನದಿ ನೀರಿನ ಅಲೋಕೇಷನ್, ನೀರಿನ ಸಮರ್ಪಕ ಬಳಕೆ, ಸಾದ್ಯಾವಾದಲ್ಲಿ ನೀರಿನ ಉಳಿತಾಯದ ಸಾದ್ಯತೆಗಳು, ರಾಜ್ಯದಲ್ಲಿ ದೊರೆಯುವ ನದಿ ನೀರು ಹಾಗೂ ಕೇಂದ್ರ ಸರ್ಕಾರದ ನದಿ ಜೋಡಣೆಯ ನೀರನ್ನು ಬಳಸಿಕೊಂಡು, ಎಲ್ಲೆಲ್ಲಿ ನೀರಾವರಿ ಆಗಿಲ್ಲವೋ ಅಂತಹ ಕಡೆ ನೀರಾವರಿ ಯೋಜನೆ ರೂಪಿಸಲು ತಾಂತ್ರಿಕ ಅಧ್ಯಯನ ವರದಿ ನೀಡುವುದು ಸಮಿತಿಯ ಕಾರ್ಯವ್ಯಾಪ್ತಿಯಾಗಿದೆ.
ರಾಜ್ಯದ ಎಲ್ಲಾ 224 ವಿಧಾನಸಭಾ ಕೇತ್ರಗಳ ವ್ಯಾಪ್ತಿಯ ನೀರಾವರಿ ಯೋಜನೆಗಳ ಬಗ್ಗೆ, ಆಯಾ ಕ್ಷೇತ್ರದ ಶಾಸಕರು, ವಿಶೇಷ ಆಸಕ್ತಿ ವಹಿಸಿ ಉತ್ತಮವಾದ ವರದಿ ತಯಾರಿಸಲು ಅಧಿಕಾರಿಗಳಿಂದ ಪಕ್ಕಾ ಡಾಟಾ ಸಂಗ್ರಹಿಸುವ ಕೆಲಸ ಮಾಡಬೇಕಿದೆ. ಈಗ ಸುಮ್ಮನಿದ್ದು ನಂತರ ಬೀದಿಗೆ ಬರುವ ನಾಟಕವಾಡುವ ಕೆಲಸ ಆಗಬಾರದು.
ಕೇಂದ್ರ ಸರ್ಕಾರದ ಪಿಎಂಕೆಎಸ್ವೈ ಯೋಜನೆಯಡಿ ಸಿದ್ಧಪಡಿಸಿರುವ ಡಿಸ್ಟಿçಕ್ಟ್ ರ್ರಿಗೇಷನ್ ಪ್ಲಾನ್ ಮತ್ತು ಸ್ಟೇಟ್ ರ್ರಿಗೇಷನ್ ಪ್ಲಾನ್, ಅಟಲ್ ಭೂಜಲ್ ಯೋಜನೆಯ ವಾಟರ್ ಆಡಿಟ್, ವಾಟರ್ ಬಡ್ಜೆಟ್, ವಾಟರ್ ಸ್ಟಾçಟಜಿ, ನ್ಯಾಷನಲ್ ಇನ್ಪಾಸ್ಟçಚ್ಚರ್ ಪೈಪ್ ಲೈನ್ ಯೋಜನೆಯ, ಅಂಕಿ ಅಂಶಗಳನ್ನು ಈ ಸಮಿತಿ ಗಣನೆಗೆ ತೆಗೆದುಕೊಳ್ಳಬೇಕಿದೆ.
ಇದೊಂದು ರಾಜ್ಯದ ಅತ್ಯುತ್ತಮವಾದ ‘ಜಲಗ್ರಂಥ’ ವಾಗಲಿದೆ. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಹಾಗೂ ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ, ಶ್ರಮಿಸಿರುವ ‘ಊರಿಗೊಂದು ಕೆರೆ – ಆ ಕೆರೆಗೆ ನದಿ ನೀರು’ ಯೋಜನೆ ಬಗ್ಗೆ, 2019 ರಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ, ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ನಿರ್ಣಯ ಕೈಗೊಂಡು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಹಾಗೂ ನಮ್ಮ ಸಂಸ್ಥೆಯು ಅಧ್ಯಯನ ಮಾಡಿ, ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದ ಎಲ್ಲಾ ಅಂಶಗಳೂ, ಈಗ ಕಾನೂನು ಬದ್ಧವಾದ ವರದಿಯಲ್ಲಿ ಸೇರ್ಪಡೆಯಾಗಲಿದೆ.
ತಾಂತ್ರಿಕ ಸಮಿತಿಯ ಅಧ್ಯಕ್ಷರಾಗಿ ಸರ್ಕಾರ ನಿವೃತ್ತ ಕಾರ್ಯದರ್ಶಿ ಶ್ರೀ ಜಿ.ಟಿ.ಚಂದ್ರಶೇಖರಪ್ಪನವರು, ಸದಸ್ಯರಾಗಿ ನಿವೃತ್ತ ಮುಖ್ಯ ಇಂಜಿನಿಯರ್ಗಳಾದ ಶ್ರೀ ಆರ್.ಚಲುವರಾಜ್ರವರು, ಶ್ರೀ ಎಂ.ಜಿ.ಶಿವಕುಮಾರ್ ರವರು, ಶ್ರೀ ಎಸ್.ಹೆಚ್. ಮಂಜಪ್ಪನವರು, ಶ್ರೀ ಎಸ್.ಎಲ್ ಶಿವಪ್ರಸಾದ್ರವರು, ಶ್ರೀ ಕೇದಾರ ಸ್ವಾಮಿರವರು, ವಿಶೇಷ ಆಹ್ವಾನಿತರಾಗಿ ಜಲವಿಜ್ಞಾನ ತಜ್ಞರಾದ ಪ್ರೋ. ಶ್ರೀ ರಾಮಪ್ರಸಾದ್ರವರು, ಅಂತರ್ ರಾಜ್ಯ ವಿವಾದಗಳ ಪ್ರಧಾನ ತಾಂತ್ರಿಕ ಸಲಹೆಗಾರರಾದ ಶ್ರೀ ಶ್ರೀರಾಮಯ್ಯನವರು ಮತ್ತು ಸರ್ಕಾರದ ಸಂಭ0ಧಿಸಿದ ಅಧಿಕಾರಿಗಳು ಇದ್ದಾರೆ, ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ರೈತರಿಗೆ ನೀರೇ ಜೀವಾಳವಾದ್ದರಿಂದ, ರಾಜ್ಯಾದ್ಯಾಂತ ರಚನೆಯಾಗುತ್ತಿರುವ 1008 ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ, ರಾಜ್ಯದ್ಯಾಂತ ಜನಜಾಗೃತಿ ಕೈಗೊಳ್ಳುವ ಆಲೋಚನೆ ಇದೆ. ಶೀಘ್ರದಲ್ಲಿ ರಾಜ್ಯ ಮಟ್ಟದ ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಂಡು ರೂಪುರೇಷೆ ನಿರ್ಧರಿಸಲಾಗುವುದು.