27th June 2025
Share

TUMAKURU:SHAKTHIPEETA FOUNDATION

ದಿನಾಂಕ:02.06.2025 ರಂದು ಧಾರವಾಡ ಜಿಲ್ಲೆಯ ಫ್ರೀ ಟೈಮ್ ಸಾವಯವ ಕೃಷಿಕರಾದ ಶ್ರೀ ಡಾ:ಚಿದಾನಂದ್ ರಾಮನ ಗೌಡರ್ ರವರು ಮತ್ತು ಡಾ. ಶ್ರೀಮತಿ ದಾಕ್ಷಯಣಿರವರ ಫಾರಂಗೆ ಭೇಟಿ ನೀಡಿದ್ದೆವು.

ಜೊತೆಯಲ್ಲಿ ಧಾರವಾಡ ಜಿಲ್ಲೆಯ ಕೃಷಿ ಆಶ್ರಮಗಳ ಪ್ರಮುಖರಾದ ಶ್ರೀ ಶ್ರೀನಿವಾಸ್ ಜೋಷಿರವರು, ಶ್ರೀ ಪರುಷರಾಮ್ ರವರು, ಶ್ರೀ ಮಾಳಪ್ಪ ಹೊನ್ನಹಳ್ಳಿ ರವರು, ಶ್ರೀ ಕಲ್ಲಪ್ಪ ನಾಯ್ಕರ್ ರವರು ಇದ್ದರು.

ಡಾ. ಶ್ರೀಮತಿ ದಾಕ್ಷಯಣಿರವರು ಸ್ಥಳದಲ್ಲಿ ಇರಲಿಲ್ಲ, ಅವರ ಪಾಲೇ ಹೆಚ್ಚು ಎಂದು ಅವರ ಪತಿ ಡಾ:ಚಿದಾನಂದ್ ರಾಮನ ಗೌಡರ್ ರವರು ಹೆಮ್ಮೆಯಿಂದ ಹೇಳಿಕೊಂಡರು. ಅವರು ಧಾರವಾಡದಲ್ಲಿ ಒಳ್ಳೆ ಆಸ್ಪತ್ರೆ ನಡೆಸುತ್ತಿದ್ದಾರೆ. ಪ್ರೀ ಟೈಮ್ ನಲ್ಲಿ ಸುಮಾರು 2.5 ಎಕರೆ ಸಾವಯವ ಕೃಷಿ ಆರಂಭಿಸಿ, ನೆಮ್ಮದಿ ಮತ್ತು ಆರೋಗ್ಯ ಬದಲಾವಣೆಯಿಂದ ಮತ್ತೆ ಇನ್ನೂ 7-8 ಎಕರೆಯಲ್ಲಿ ಸಾವಯವ ಕೃಷಿ ಆರಂಭಿಸುತ್ತಿದ್ದಾರೆ.

ಅವರ ಫಾರಂಗೆ ಕನ್ನೇರಿ ಶ್ರೀಗಳು ಭೇಟಿ ನೀಡಿದ್ದರೆಂದು ಸಂತೋಷದಿಂದ ಹೇಳಿದರು. ಆದರೇ ಅವರು ಇನ್ನೂ ಕೃಷಿ ಆಶ್ರಮದ ಪಟ್ಟಿಯಲ್ಲಿ ಸೇರಿಲ್ಲ. ಸೇರ್ಪಡೆಯಾಗಲು ಮನವಿ ಮಾಡಲಾಯಿತು.

ನಗರದ ಆರ್.ಸಿ.ಸಿ ಮನೆ ಬಿಟ್ಟು, ಫಾರಂನಲ್ಲಿ ಸಗಣಿ ಬಗ್ಗಡದ ಮನೆಯಲ್ಲಿಯೇ ಮಲಗುತ್ತೇವೆ ಎಂದು ಹೇಳಿದಾಗ, ದಂಪತಿಗಳಿಗೆ ಫಾರಂ ಬಗ್ಗೆ ಇರುವ ಪ್ರೀತಿ ಎಷ್ಟು ಎಂಬ ಅರಿವು ಆಯಿತು.