TUMAKURU:SHAKTHIPEETA FOUNDATION
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಸಂಶೋಧನೆ ನಡೆಸಿದ ಯೋಜನೆಯ ಒಂದು ಭಾಗವಾಗಿ, ಕರ್ನಾಟಕ ರಾಜ್ಯ ಸರ್ಕಾರ, ರಾಜ್ಯ ಮಟ್ಟದಲ್ಲಿ ತನ್ನದೇ ಆದ ಅನುದಾನದಲ್ಲಿ
1. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು,
2. ಕೃಷ್ಣಾ,
3. ಕಾವೇರಿ,
4. ಪಾಲಾರ್
5. ದಕ್ಷಿಣ ಪೆನ್ನಾರ್
6. ಉತ್ತರ ಪೆನ್ನಾರ್
ಮೇಲ್ಕಂಡ 6 ನದಿ ಪಾತ್ರಗಳ ಜೋಡಣೆ ಮಾಡುವಂತಹ ‘ಎತ್ತಿನಹೊಳೆ’ ಯೋಜನೆಯನ್ನು ಆರಂಭಿಸಿದೆ. ಇದು ರಾಜ್ಯದ ನದಿ ಜೋಡಣೆಯ‘ಕರ್ನಾಟಕ ವಾಟರ್ ಗ್ರಿಡ್ ಕೆನಾಲ್’ ಯೋಜನೆಯ ಪೈಲೆಟ್ ಯೋಜನೆಯಾಗಿದೆ ಎಂದರೆ ತಪ್ಪಲ್ಲ.
ಇದು ಸಾಮಾನ್ಯ ಕೆಲಸವಲ್ಲ, 1997 ರಿಂದ ಇಲ್ಲಿಯವರೆಗೂ ಆಗಿರುವ ಎಲ್ಲಾ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಮತ್ತು ಮಾಜಿ ಜಲಸಂಪನ್ಮೂಲ ಸಚಿವರ ಪಾತ್ರದ ಜೊತೆಗೆ, ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಪಾತ್ರ, ತಜ್ಞರ ಮತ್ತು ಹೋರಾಟಗಾರರ ಪಾತ್ರವೂ ಇದೆ.
1997 ರಿಂದ ಇಲ್ಲಿಯವರೆಗೂ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಮತ್ತು ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಯಲ್ಲಿ ನಿರಂತರವಾಗಿ ಶ್ರಮಿಸಿದ್ದೇನೆ. ಒಂದೊಂದು ಕಡತದ ಇತಿಹಾಸವೂ ಗೊತ್ತಿದೆ. ನಾವೂ ಈ ವಿಚಾರದಲ್ಲಿ ಸಾಧಕರೂ ಹೌದು.
ಕೇಂದ್ರ ಸರ್ಕಾರದ ನ್ಯಾಷನಲ್ ಡೆವಲಪ್ಮೆಂಟ್ ಏಜೆನ್ಸಿಯಿಂದ ಕೆಳಕಂಡ ಯೋಜನೆಗಳನ್ನು ಕೈಗೊಳ್ಳಲು ಸಿದ್ಧವಿದೆ. ಆದರೇ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಕಾರಣ ಕೆಲವು ಯೋಜನೆಗಳಿಗೆ ನೀರಿನ ಅಲೋಕೇಷನ್ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ತಳೆದಿಲ್ಲ ಹಾಗೂ ಕೆಲವು ಯೋಜನೆಗಳಿಗೆ ಚುನಾಯಿತ ರಾಜಕಾರಣಿಗಳ, ಅಧಿಕಾರಿಗಳ ರಾಜಕೀಯವೂ ಸೇರಿದೆ ಎಂದರೆ ಅತಿಶಯೋಕ್ತಿಯಲ್ಲ.
1. ಭಧ್ರಾ ಮೇಲ್ದಂಡೆ ಎನ್.ಪಿ.ಪಿ ಯೋಜನೆ.
2. ಎತ್ತಿನಹೊಳೆ ಎನ್.ಪಿ.ಪಿ ಯೋಜನೆ.
3. ಮಹಾನದಿ-ಗೋದಾವರಿ-ಕೃಷ್ಣಾ- ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ನದಿ ಜೋಡಣೆ
4. ಗೋದಾವರಿ-ಕಾವೇರಿ ಲಿಂಕ್ ನದಿ ಜೋಡಣೆ
5. ಬೇಡ್ತಿ-ಹಿರೇವಡ್ಡಹಟ್ಟಿ ಲಿಂಕ್ ನಿಂದ ದೊರೆಯುವ ನೀರು.
6. ಅಘಿನಾಶಿನಿಯಿಂದ ವಾಣಿವಿಲಾಸ ಡ್ಯಾಂಗೆ ಹಾಕುವ ನೀರು.
7. ನೇತ್ರಾವತಿ-ಹೇಮಾವತಿ ನದಿ ಜೋಡಣೆ
8. ಬೇಡ್ತಿ-ವರದಾ ನದಿ ಜೋಡಣೆ
9. ಕಾಳಿ ನದಿ ಯೋಜನೆ.
10. ಲಿಂಗನಮಕ್ಕಿ ನೀರಿನ ಯೋಜನೆ
11. ಕಾವೇರಿ ಹೆಚ್ಚುವರಿ ನೀರು.
12. ಕೃಷ್ಣಾ ಹೆಚ್ಚುವರಿ ನೀರು
13. ಪಶ್ಚಿಮಾಭಿಮುಖವಾಗಿ ಹರಿಯುವ ಇತರೆ ನದಿ ನೀರಿನ ಯೋಜನೆ
14. ತಮಿಳು ನಾಡಿಗೆ ರಾಜ್ಯದಿಂದ ಬಿಡುವ ನೀರಿಗೆ ಪೂರಕವಾಗಿ, ತಮಿಳು ನಾಡು ಮೂಲಕ ಸಮುದ್ರ ಸೇರುವ 205 ಟಿ.ಎಂ.ಸಿ ಅಡಿ ನೀರಿನ ಮಾಹಿತಿ (ಜಿ.ಎಸ್.ಪರಮಶಿವಯ್ಯವವರದಿ ಆಧಾರಿತ)
15. ಗಂಗಾ-ಕಾವೇರಿ ನದಿ ಜೋಡಣೆಯಿಂದ ದೊರೆಯುವ ನದಿ ನೀರು.
ಈಗ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ, ಪ್ರಧಾನಿವರಾದ ಶ್ರೀ ನರೇಂದ್ರಮೋದಿಯವರು ಹಾಗೂ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರನ್ನು ಸೇರಿದಂತೆ ಎಲ್ಲರ ಮನವೊಲಿಸುವ ಖ್ಯಾತಿ ಇವರಿಗಿದೆ.
ರಾಜ್ಯ ಸರ್ಕಾರಗಳು ತನ್ನ ಪಾಲನ್ನು ಭರಿಸಿದರೂ, ಜಲಜೀವನ್ ಮಿಷನ್ ಯೋಜನೆ ಪ್ರಧಾನಿ ಮೋದಿಯವರ ಕನಸಿನ ಯೋಜನೆ, ನದಿಗಳ ತೆರೆದ ಕಾಲುವೆ ಮತ್ತು ಬೋರ್ವೆಲ್ಗಳಿಂದ ಗ್ರಾಮೀಣ ಪ್ರದೇಶಗಳಿಗೆ ನೀರು ಕೊಡುವುದು ಕಷ್ಟವಾಗುತ್ತಿದೆ. ಅಧಿಕಾರಿಗಳು ಸತ್ಯ ಹೇಳಲು ಭಯಪಡುತ್ತಾರೆ.
ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದ 31 ಜಿಲ್ಲೆಗಳ ಪ್ರತಿಯೊಂದು ಗ್ರಾಮಗಳಿಗೂ, ನೇರವಾಗಿ ನದಿ ಮೂಲದ ಡ್ಯಾಂನಿಂದ ಪೈಪ್ ಮೂಲಕವಾಗಿ, ನೀರು ಉಣಿಸುವ ‘ಜಲಜೀವನ್ ಮಿಷನ್ ಕಾರಿಡಾರ್’ ಯೋಜನೆ ಜಾರಿಗೊಳಿಸಿ, ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವುದು ಭಗಿರಥ ಪ್ರಯತ್ನ. ಇದು ಕೇಂದ್ರ ಸರ್ಕಾರದ ಉದ್ದೇಶವೂ ಹೌದು. ಅಗತ್ಯಕ್ಕೆ ಅನುಗುಣವಾಗಿ ಯೋಜನೆ ಆರಂಭಿಸಬಹುದಾಗಿದೆ.
ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಮತ್ತು ಮುಖ್ಯ ಕಾರ್ಯದರ್ಶಿ ಸೇರಿದಂತೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಭಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ,
‘ನಮಗೆ ಗೊತ್ತಿಲ್ಲ ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ಜಲಜೀವನ್ ಮಿಷನ್ ಯೋಜನೆಗೆ ನದಿ ನೀರಿನ ಯೋಜನೆ ರೂಪಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಥವಾ ಕೇಂದ್ರ ಸರ್ಕಾರವೇ ಪ್ರಸ್ತಾವನೆ ಸಿದ್ಧಪಡಿಸಲು ರಾಜ್ಯ ಸರ್ಕಾರದ ಅನುಮತಿ ನೀಡಲು ಮತ್ತು ಯಾವ ಅನುದಾನ ಹೂಡಿಕೆ ಮಾಡಬಹುದು ಎಂಬ ಸಲಹೆಗಳನ್ನು ನೀಡಲು, ಅಧಿಕಾರಿಗಳಿಗೆ ಆದೇಶ ನೀಡುವ ಒಂದು ಸಭೆ ನಡವಳಿಕೆ ಮಾಡಿ, ಒಂದು ತಿಂಗಳ ಗಡುವು ನೀಡಿ, ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಅತ್ಯುತ್ತಮವಾದ ಒಂದು ಪರಿಕಲ್ಪನಾ ವರದಿಯನ್ನು ಸಿದ್ಧ ಪಡಿಸಿ ತಮಗೆ ನೀಡಲಿದ್ದಾರೆ.’
ನಂತರ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳಬಹುದಾಗಿದೆ. ಪಕ್ಷಾ ತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತವೆ. ಅಂತಹ ಯೋಜನೆ ಸಿದ್ಧಪಡಿಸಲು ನಮ್ಮ ಅಧಿಕಾರಿಗಳು ತುದಿಗಾಲಲ್ಲಿ ನಿಂತಿವೆ. ನಂತರ ‘ಸಚಿವ ಸಂಪುಟದ ಅನುಮೋದನೆಯೊಂದಿಗೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ಜಂಟಿ ವಿಶೇಷ ಅಧಿವೇಶನದಲ್ಲಿ ನಿರ್ಣಯ ಮಾಡಿ ಇತಿಹಾಸ ಸೃಷ್ಠಿಸ ಬಹುದಾಗಿದೆ.’
ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲು 42 ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಸಹಕಾರದಿಂದ ಮಂಜೂರು ಪತ್ರ ಪಡೆಯೊಣ, ಅಂತರ ರಾಜ್ಯ ವಿವಾದಗಳು ಬರಲಿ, ಪೂರಕವಾಗಿ ನಾವು ಹೇಗೆ ಕೆಲಸ ಆರಂಭಿಸಬಹುದು ಎಂಬ ಅರಿವು ನಮ್ಮ ಅಧಿಕಾರಿಗಳಿಗೆ ಇದೆ. ಆದರೇ ಒಳ ರಾಜಕೀಯ ಇರಬಾರದಷ್ಟೆ. ಅಗತ್ಯ ಬಿದ್ದರೆ ನ್ಯಾಯಾಲಯದ ಬಾಗಿಲು ತಟ್ಟೋಣ.
‘ಸುಂಕಾಪುರದ ಬಳಿ, ಅದಿಕಾರಿಗಳಿಗೆ, ಹುಟ್ಟಿದವರೆಲ್ಲಾ ಸಾಯುತ್ತೀರಿ, ಆದರೇ ಋಣ ತೀರಿಸಿ ಎಂದು ಸೋಮಣ್ಣವರು ನೀಡಿದ ಹೇಳಿಕೆ ನಿಜಕ್ಕೂ ಅದ್ಭುತ. ಅದೇ ರೀತಿ ಇಡೀ ರಾಜ್ಯದ ಜನತೆಗೆ ಬೃಹತ್ ಕೊಡುಗೆ ನೀಡುವ “ಒಂದು ಸುವರ್ಣ ಅವಕಾಶ ಅಥವಾ ಚಾಲೇಂಜ್” ಅವರ ಮುಂದೆ ಒದಗಿ ಬಂದಿದೆ.’
ತುಮಕೂರಿನ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯ ಹೋರಾಟಗಾರರೇ ನಿಮಗೊಂದು ಹೃದಯಪೂರ್ವಕ ಶರಣು. ಒಳ್ಳೆ ಹೆಜ್ಜೆ ಇಟ್ಟೀದ್ದೀರಿ, ಈ ಪ್ರಸ್ತಾವನೆಯ ಹೋರಾಟ ಆರಂಭಿಸಿ, ನೀವೂ ಒಂದು ದಡ ಸೇರುತ್ತೀರಿ. ನಾನು ಈ ಎಲ್ಲಾ ವಿಚಾರಗಳನ್ನು ಸೇರಿಸಿ ನ್ಯಾಯಾಲಯಕ್ಕೆ ಪಿ.ಐ.ಎಲ್ ಹಾಕಲು ಒಂದು ತಂಡದೊಂದಿಗೆ ಸಿದ್ಧತೆ ಆರಂಭಿಸಿದ್ದೇನೆ.
ನೀರಾವರಿ ವಿವಾದಗಳ ಎಲ್ಲಾ ಒಳಸುಳಿಗಳನ್ನು ಅರಿತಿರುವ, ನಾನು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಪಿ.ಐ.ಎಲ್ ಹಾಕುವ ಮುನ್ನ ಸಾವಿರ ಭಾರಿ ಯೋಚಿಸುವ ಅಗತ್ಯವೂ ಇದೆ. ಎಲ್ಲಾ ತಜ್ಞರ ಸಲಹೆಗಳನ್ನು ಸಂಗ್ರಹ ಮಾಡುತ್ತಿದ್ದೇನೆ.
‘ಇದು ನನ್ನ ಜೀವನದ ಹೆಚ್.ಎ.ಎಲ್ ಮಾದರಿ ಹೋರಾಟಕ್ಕೂ ಹೆಚ್ಚು ಶ್ರಮವಹಿಸುವ ಕೆಲಸವಾಗಿದೆ. ಗಂಗಾಮಾತೆಯ ಕೆಲಸ ಅತ್ಯಂತ ತೃಪ್ತಿಯೂ ಇದೆ. ಶಕ್ತಿ ಪೀಠಗಳ ಆದೇಶವೂ ಇದೆ.’
-ಕುಂದರನಹಳ್ಳಿ ರಮೇಶ್, ಅಧ್ಯಕ್ಷ ಅಭಿವೃದ್ಧಿ ರೆವೂಲ್ಯೂಷನ್ ಫೋರಂ.