15th June 2025
Share

TUMAKURU:SHAKTHIPEETA FOUNDATION

1008 ಕೃಷಿ ಆಶ್ರಮಗಳ ವಾಟ್ಸ್ಅಫ್ ಗ್ರೂಪ್‌ನಲ್ಲಿ ಇರುವ 452 ಸದಸ್ಯರಿಗೂ ಹಾಗೂ ಕೃಷಿ ಆಶ್ರಮಗಳ ಆಕ್ಷನ್ ಪ್ಲಾನ್ ವಾಟ್ಸ್ಅಫ್ ಗ್ರೂಪ್‌ನಲ್ಲಿ ಇರುವ 66 ಸದಸ್ಯರಿಗೂ ಸಭೆಯಲ್ಲಿ ಭಾಗವಹಿಸಲು ಹೃದಯ ಪೂರ್ವಕ ಮನವಿ.

ದಿನಾಂಕ:04.05.2025 ರಂದು ತುಮಕೂರಿನ ಶಕ್ತಿಭವನದಲ್ಲಿ, 1008 ಕೃಷಿ ಆಶ್ರಮಗಳ ಮಾರ್ಗಸೂಚಿ ಸಿದ್ಧಪಡಿಸುವ ಪ್ರಥಮ ಸಭೆಯನ್ನು ಆಯೋಜಿಸಲಾಗಿತ್ತು.

ದಿನಾಂಕ:22.06.2025 ರಂದು ಬೆಳಿಗ್ಗೆ 10 ಘಂಟೆಗೆ ತುಮಕೂರಿನ ಶಕ್ತಿಭವನದಲ್ಲಿ 1008 ಕೃಷಿ ಆಶ್ರಮಗಳ ಮಾರ್ಗಸೂಚಿ ಸಿದ್ಧಪಡಿಸುವ ಎರಡನೇ ಸಭೆಯನ್ನು ಆಯೋಜಿಸಲಾಗಿದೆ.

ಸಭೆಯಲ್ಲಿ ಚರ್ಚಿಸುವ ವಿಷಯಗಳು.

1.            1008 ಕೃಷಿ ಆಶ್ರಮಗಳ ಮಾರ್ಗಸೂಚಿಯಲ್ಲಿರುವ 133 ಅಂಶಗಳ ಬರವಣಿಗೆ ಪ್ರಗತಿ ಬಗ್ಗೆ.

2.            1008 ಕೃಷಿ ಆಶ್ರಮಗಳ ಡಿಜಿಟಲ್ ಪ್ಲಾಟ್ ಫಾರಂ ಬಗ್ಗೆ.

3.            1008 ಕೃಷಿ ಆಶ್ರಮಗಳ ಉತ್ಪನ್ನಗಳ ಮಾರಾಟ  ಡಿಜಿಟಲ್ ಪ್ಲಾಟ್ ಫಾರಂ ಬಗ್ಗೆ.

4.            ರಾಜ್ಯದ್ಯಾಂತ ಇರುವ ಗೋಶಾಲೆಗಳ ಶಾಲೆಗಳ ಸುಸ್ಥಿರತೆಗೆ ಮಾರ್ಗೋಪಾಯಗಳು ಮತ್ತು ಉತ್ಪನ್ನಗಳ ಮಾರಾಟ ಡಿಜಿಟಲ್ ಪ್ಲಾಟ್ ಫಾರಂ ಬಗ್ಗೆ.

5.            ಈಗಾಗಲೇ 136 ಕೃಷಿ ಆಶ್ರಮಗಳು ಗೂಗಲ್ ಫಾರಂನಲ್ಲಿ ಮಾಹಿತಿಗಳನ್ನು ನೊಂದಾಯಿಸಿಕೊ0ಡಿವೆ. ಮುಂದಿನ ಚಟುವಟಿಕೆಗಳ ಬಗ್ಗೆ ಯೋಜನೆಯ ರೂಪುರೇಷೆ ಬಗ್ಗೆ.

6.            ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರು, ರಾಜ್ಯದ 31 ಜಿಲ್ಲೆಗಳ ಕೃಷಿ ಆಶ್ರಮಗಳ ಉಸ್ತುವಾರಿಗೆ ಆಸಕ್ತ ಕೃಷಿ ಆಶ್ರಮಗಳಿಗೆ ಜವಾಭ್ಧಾರಿ ನೀಡಿದ್ದಾರೆ. ಜಿಲ್ಲಾವಾರು ಇರುವ ವಿಧಾನಸಭಾ ಕ್ಷೇತ್ರಗಳವಾರು ಕೃಷಿ ಆಶ್ರಮಗಳ ಪಟ್ಟಿ ಮಾಡಿ, ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಆಶ್ರಮಗಳು ಇಲ್ಲವೋ, ಅಂತಹ ವಿಧಾನ ಸಭಾ ಕ್ಷೇತ್ರಗಳಲ್ಲಿ ಕೃಷಿ ಆಶ್ರಮ ಆರಂಭಿಸಲು ಆಸಕ್ತಿ ಇರುವವರ ಮಾಹಿತಿ ಸಂಗ್ರಹಿಸುವುದು.

7.            ಬಳ್ಳಾರಿ ಜಿಲ್ಲೆಯ ಶ್ರೀ ಜಗನ್ನಾಥ್ ರಾವ್ ರವರು ನೀಡಿರುವ 1008 ಪ್ರಭೇಧಗಳ ಪಟ್ಟಿ, ತುಮಕೂರು ಜಿಲ್ಲೆಯ ಶ್ರೀ ಪ್ರದೀಫ್‌ರವರು ನೀಡಿರುವ 500 ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಪಟ್ಟಿ ಮತ್ತು ಚಿತ್ರದುರ್ಗ ಜಿಲ್ಲೆಯ ಶ್ರೀ ರವಿತೇಜರವರು ಗ್ರೂಪ್ ಸದಸ್ಯರೊಂದಿಗೆ ಚರ್ಚಿಸಿ ಸಿದ್ಧಪಡಿಸಿರುವ ಬಳ್ಳಿಗಳ ಪಟ್ಟಿಯ ಜೊತೆಗೆ ಆಸಕ್ತರು ನೀಡುವ ಬೆಳೆಗಳ ಪಟ್ಟಿಯನ್ನು, ಆಸಕ್ತ ಕೃಷಿ ಆಶ್ರಮಗಳು ಆಯ್ಕೆ ಮಾಡಿಕೊಳ್ಳಲು ಪಟ್ಟಿಯನ್ನು ಘೋಷಣೆ ಮಾಡುವುದು.

8.            1008 ಪ್ರಭೇಧಗಳು ಮತ್ತು ಹೆಚ್ಚುವರಿ ಪ್ರಭೇಧಗಳ ಪಟ್ಟಿಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಭAಧಿಸಿದ ವಿವಿಧ ಇಲಾಖೆಗಳಿಗೆ, ಪ್ರಭಂಧ, ಸಂಶೋಧನೆ, ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್ @ 2047, ರ ಪ್ರಸ್ತಾವನೆ ಸಲ್ಲಿಸುವ ಬಗ್ಗೆ.

9.            ಆಯ್ಕೆ ಮಾಡಿದ ಎಲ್ಲಾ ಪ್ರಭೇಧಗಳ ಪ್ರಾರಂಭಿಸ ಬಹುದಾದ ಸ್ಟಾರ್ಟ್ ಅಫ್‌ಗಳ  ಮಾಹಿತಿ ಬಗ್ಗೆ ತುಮಕೂರು ಸ್ಟಾರ್ಟ್ಅಫ್‌ನ ಶ್ರೀ ಸುಹೃತ್ ಉಜ್ಜನಿಯವರು ಸಿದ್ಧಪಡಿಸಿರುವ ಪಿ.ಪಿ.ಟಿ ಪ್ರದರ್ಶನದ ಬಗ್ಗೆ.

10.          ಚಿತ್ರದುರ್ಗ ಜಿಲ್ಲೆಯ ಶ್ರೀ ಜ್ಞಾನೇಶ್‌ರವರು ಮತ್ತು ಶ್ರೀ ರವಿತೇಜರವರು ಕೃಷಿ ಆಶ್ರಮಗಳ ಸಂಘಟನೆಗೆ ನೀಡಿರುವ ಸಲಹೆಗಳ ಬಗ್ಗೆ. 

11.          ಬಾಗಲಕೋಟೆ ಜಿಲ್ಲೆಯ ಶ್ರೀ ಮಂಜುನಾಥ್‌ರವರು  ಸಾವಯವ ಗೊಬ್ಬರದ ಬಗ್ಗೆ ನೀಡಿರುವ ಸಲಹೆಗಳ ಬಗ್ಗೆ. 

12.          ವಿಜಯನಗರ ಜಿಲ್ಲೆಯ ಶ್ರೀ ವಿಶ್ವೇಶ್ವರ ಸಜ್ಜನ್ ರವರು ಸಮಾಲೋಚನೆ ಮಾಡಿರುವ ಪರಿಕಲ್ಪನೆಗೆ ಪೂರಕವಾಗಿ, 1997 ರಿಂದ ನಮ್ಮ ವಿವಿಧ ಸಂಸ್ಥೆಗಳು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಹಾಗೂ ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ, ಶ್ರಮಿಸಿರುವ  ‘ಊರಿಗೊಂದು ಕೆರೆ – ಆ ಕೆರೆಗೆ ನದಿ ನೀರು’ ಯೋಜನೆ ಬಗ್ಗೆ 2019 ರಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಂಡು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿಗಳ ಪ್ರಗತಿ ಹಾಗೂ ‘ರಾಜ್ಯ ಸರ್ಕಾರ ರಚಿಸಿರುವ ರಾಜ್ಯದಲ್ಲಿನ ಒಣ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ತರಲು ಯೋಜನೆಗಳನ್ನು ರೂಪಿಸಲು ತಾಂತ್ರಿಕ ತಜ್ಞರನ್ನೊಳಗೊಂಡ ಸಮಿತಿ’ಗೆ, ಕರ್ನಾಟಕ ರಾಜ್ಯದ 224 ವಿಧಾಸಭಾ ಕ್ಷೇತ್ರಗಳವಾರು    ಕೃಷಿ ಆಶ್ರಮಗಳ ನೇತೃತ್ವದಲ್ಲಿ 224 ವಿಧಾನಸಭಾ ಕ್ಷೇತ್ರಗಳ ನೀರಾವರಿ ಹೋರಾಟಗಾರರು, ನೀರಾವರಿ ತಜ್ಞರುಗಳು, ನೀರಾವರಿ ಸಂಶೋಧಕರು, ರೈತಮುಖಂಡರು, ವಿವಿಧ ವರ್ಗದ ಆಸಕ್ತ ಸಂಘಸAಸ್ಥೆಗಳು,  ಎಲ್ಲಾ ಹಂತದ ಚುನಾಯಿತ ಜನಪ್ರತಿನಿಧಿಗಳು, ಸರ್ವಪಕ್ಷಗಳ ಸದಸ್ಯರೊಂದಿಗೆ ಸಭೆ ಆಯೋಜಿಸಿ, ಅವರ ಎಲ್ಲಾ ಸಲಹೆಗಳನ್ನು ಪರಿಗಣಿಸಿ,  ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಗೆ  ಕ್ರೋಢಿಕೃತ ಸಲಹೆ ನೀಡುವ ಬಗ್ಗೆ.

13.          ತುಮಕೂರು ಜಿಲ್ಲೆಯ ಶ್ರೀ ಮಹೇಶ್ ರವರು ಸಲಹೆ ನೀಡಿರುವ ಅಗ್ರಿಟೂರಿಸಂ ಯೋಜನೆ ಬಗ್ಗೆ.

14.          ಇದೂವರೆಗೂ ಶ್ರೀ ಬಿ.ಎಂ.ನಾಗಭೂಷಣ್ ರವರು ವಿವಿಧ ಕೃಷಿ ಆಶ್ರಮಗಳಿಗೆ ನೀಡಿರುವ ವಿವಿಧ ಹೊಣೆಗಾರಿಕೆಗಳ ಬಗ್ಗೆ.

15.          ದಿನಾಂಕ:01.08.2025 ನೇ ಶುಕ್ರವಾರ, ಚಿತ್ರದುರ್ಗ ಜಿಲ್ಲೆಯ, ಶಕ್ತಿಪೀಠ ಕ್ಯಾಂಪಸ್‌ನಲ್ಲಿ, ರಾಜ್ಯದ ಎಲ್ಲಾ ಕೃಷಿ ಆಶ್ರಮಗಳು, ಒಂದೊAದು ಪ್ರಭೇದದ ಗಿಡಗಳನ್ನು ನೆಡುವ ಮೂಲಕ, ಒಂದೊAದು ಪ್ರಭೇದದ ಹೊಣೆಗಾರಿಕೆ ಪಡೆಯುವ ಬಗ್ಗೆ.

16.          ವಿಶ್ವ ದಾಖಲೆಯೊಂದಿಗೆ ಪಂಚವಟಿ ಗಿಡ ಹಾಕುವ ಆಂದೋಲನದ ಬಗ್ಗೆ.

17.          ಎಲ್ಲಾ ಕೃಷಿ ಆಶ್ರಮಗಳು, ಪಾರಂಪರಿಕ ವೈಧ್ಯರು, ನಾಟಿ ವೈಧ್ಯರು ಮತ್ತು ಹಕೀಮರು ಅವರವರ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಚನೆಯಾಗಿರುವ ಬಯೋಡೈವರ್ಸಿಟಿ ಮ್ಯಾನೇಜ್ ಕಮಿಟಿಯಲ್ಲಿ ಸಕ್ರೀಯವಾಗಿ ಭಾಗವಹಿಸುವ ಬಗ್ಗೆ.

18.          1008 ಕೃಷಿ ಆಶ್ರಮಗಳ ವಾಟ್ಸ್ಅಫ್ ಗ್ರೂಪ್‌ನಲ್ಲಿ ಇರುವ 452 ಸದಸ್ಯರು ನೀಡುವ ಇತರೆ ವಿಚಾರಗಳನ್ನು ಸೇರ್ಪಡೆ ಮಾಡಲಾಗುವುದು, ಆಸಕ್ತರು ವಿಷಯಗಳನ್ನು ದಿನಾಂಕ: 20.06.2025 ರೊಳಗೆ ಲಿಖಿತವಾಗಿ ನೀಡಲು ಮನವಿ ಮಾಡಲಾಗಿದೆ.

ಸಭೆಯಲ್ಲಿ ಭಾಗವಹಿಸುವವರು ದಯವಿಟ್ಟು ನೊಂದಾಯಿಸಿ ಕೊಳ್ಳಲು ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರು ಮನವಿ ಮಾಡಿದ್ದಾರೆ.