TUMAKURU:SHAKTHIPEETA FOUNDATION
ದಿನಾಂಕ:22.06.2025 ರಂದು, ತುಮಕೂರಿನ ಶಕ್ತಿಭವನದಲ್ಲಿ ನಡೆದ, ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯಲ್ಲಿ ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರು ಖುದ್ಧಾಗಿ ಮಂಡಿಸಿದ ವಿಷಯ ‘1008 ಕೃಷಿ ಆಶ್ರಮ : ಮಾಡಿದ್ದೇನು – ಮಾಡಬೇಕಾಗಿರುವುದೇನು?’
ಇದೊಂದು ಅರ್ಥಪೂರ್ಣ ಆತ್ಮಾವಲೋಕನ ಇದರ ಬಗ್ಗೆ ಸುಧೀರ್ಘ ಚರ್ಚೆ ಆಯಿತು. ಇದೂವರೆಗೂ ಕೃಷಿ ಆಶ್ರಮಗಳ ಆಂದೋಲನದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರ ಬಳಿ ‘ಒನ್-ಟು ಒನ್ ಚರ್ಚೆ’ ಮಾಡಿ ಈ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಲು ನಿರ್ಧಾರ ಕೈಗೊಳ್ಳಲಾಯಿತು. ಈ ವರದಿಯನ್ನು ಸಿದ್ಧಪಡಿಸಲು ಆರಂಭದಿAದ ಶ್ರಮಿಸಿರುವವರ ಒಂದು ಉಪಸಮಿತಿಯನ್ನು ರಚಿಸಲಾಗುವುದು.
ಅದೇ ರೀತಿ ದಿನಾಂಕ:01.08.1988 ರಿಂದ ದಿನಾಂಕ: 01.08.2025 ರವರೆಗೂ ಸುಮಾರು 37 ವರ್ಷಗಳ ಸುಧೀರ್ಘ ಅವಧಿಯ ನನ್ನ ಸಮಾಜ ಸೇವೆಯಲ್ಲಿ ‘ಮಾಡಿದ್ದೇನು – ಮಾಡಬೇಕಾಗಿರುವುದೇನು?’ ಆತ್ಮಾವಲೋಕನ ವರದಿಯನ್ನು ಸಿದ್ಧಪಡಿಸಲು, ಸಭೆ ಮುಗಿದ ನಂತರ ಬೆಂಗಳೂರಿಗೆ ಬರುವಾಗ ನಾನು ಮತ್ತು ಶ್ರೀಗಂಧ ಕೃಷಿ ಆಶ್ರಮದ ಮುಖ್ಯಸ್ಥರಾದ ಶ್ರೀ ರಾಜೇಶ್ ಎಸ್.ಪಿ ರವರು ತೀರ್ಮಾನ ಮಾಡಿದೆವು.
ರಾಜ್ಯದ 31 ಜಿಲ್ಲೆಗಳ ಕೃಷಿ ಆಶ್ರಮಗಳ ಹೊಣೆಗಾರಿಕೆ ಪಡೆಯುವವರ ನೇತೃತ್ವದಲ್ಲಿ, ಈ ವರದಿ ಸಿದ್ಧಪಡಿಸಿ ನಾನು ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು, ಯಾರೋ ಏನೋ ಅಂದರೂ ಅಂತ ಬಿಟ್ಟು ಬಂದಿರುವ ಸಂಸ್ಥೆಗಳ ಸ್ಥಿತಿಗತಿ ಅಧ್ಯಯನ ಮಾಡಿ, ಮುಂದೆ ಅಂತರರಾಷ್ಟಿçÃಯ ಮಟ್ಟದ ಯೋಜನೆಗಳ ಅನುಷ್ಟಾನಕ್ಕೆ ಹೇಗೆ ಮುಂದುವರೆಯ ಬೇಕು. ನಾನು ಇರಲಿ, ಇಲ್ಲದಿರಲಿ ಈ ವ್ಯವಸ್ಥೆ ನಿರಂತರವಾಗಿ ಮುಂದುವರೆಯಲು ಏನು ಮಾಡಬೇಕು ಎಂಬ ಸ್ಪಷ್ಟ ನಿರ್ಧಾರ ಕೈಗೊಂಡಿದ್ದೇವೆ.
ನಾನೂ ಇದೂವರೆಗೂ ಕಟ್ಟಿದ ಸಂಸ್ಥೆಗಳಲ್ಲಿ ಸಣ್ಣ, ಸಣ್ಣ ವಿಷಯಗಳಿಗೆ ಹೊರಬಂದಿರುವ ಪರಿಣಾಮ ನನಗೆ ವೈಯಕ್ತಿಕವಾಗಿ ಬಹಳ ಅನೂಕೂಲವಾಗಿದೆ. ಆದರೇ ನಾನು ಕಟ್ಟಿದ ಸಂಸ್ಥೆಗಳ ಮೂಲಕವೇ ಹಲವಾರು ಜನಪರ ಯೋಜನೆಗಳನ್ನು ಸಾಧಿಸಿ ತೋರಿಸುವ ಅಗತ್ಯದ ಬಗ್ಗೆ ನನಗೆ ಈಗ ಅರಿವಾಗಿದೆ.
ಅಂತರ ರಾಷ್ಟಿçÃಯ, ರಾಷ್ಟಿçÃಯ, ರಾಜ್ಯ, ಗ್ರಾಮ/ಬಡಾವಣೆ ಮಟ್ಟದಲ್ಲಿ ಸಂಘಟನೆ ಮಾಡುವಾಗ, ಈ ಪಾರದರ್ಶಕತೆಯ ಅಗತ್ಯವೂ ಇದೆ. ದಿನಾಂಕ:01.08.2025 ರಿಂದ 2047 ರವರೆಗೆ ಮುಂದೆ ಶ್ರಮಿಸುವ ನಿರ್ಧಿಷ್ಟ ಯೋಜನೆಗಳಿಗೆ ಒಂದು ಸ್ಪಷ್ಟ ರೂಪು ರೇಷೆಯ ಅಗತ್ಯವೂ ಇದೆ. ವರದಿಯ ಎಲ್ಲಾ ಅಂಶಗಳನ್ನು ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಸಲ್ಲಿಸುವುದು ಅಗತ್ಯವಾಗಿದೆ.
ಶ್ರೀ ಜಿ.ಎಸ್.ಬಸವರಾಜ್ ರವರ ಅಭಿವೃದ್ಧಿ ಪರಿಕಲ್ಪನೆ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ನೀರಾವರಿ ಪರಿಕಲ್ಪನೆ, ಶ್ರೀ ಟಿ.ಆರ್. ರಘೋತ್ತಮರಾವ್ ರವರ ಅಭಿವೃದ್ಧಿ ಪರಿಕಲ್ಪನೆ. ದಿ.ಕೆ.ಆರ್.ನಾಯಕರವರ ಹೋರಾಟದ ಪರಿಕಲ್ಪನೆ, ಹೀಗೆ 37 ವರ್ಷಗಳ ಅವಧಿಯಲ್ಲಿ, ಇನ್ನೂ ಸಾವಿರಾರು ಜನರು ನನಗೆ ನೀಡಿರುವ ಮಾರ್ಗದರ್ಶನದ ಅಂಶಗಳನ್ನೂ, ಸೇರಿಸಿಕೊಂಡು ಸಿದ್ಧಪಡಿಸಿರುವ ನನ್ನದೇ ಆದ ಪರಿಕಲ್ಪನೆ ‘ನಂಬರ್ ಒನ್ ಕರ್ನಾಟಕ @ 2047, ನಾಲೇಡ್ಜ್ ಬ್ಯಾಂಕ್ @ 2047,’ ನಾನೂ ಇದೂವರೆಗೂ ಬರೆದಿರುವ 11 ಪುಸ್ತಕಗಳ ಅಂಶಗಳ ಆತ್ಮಾವಲೋಕನವೂ ಇದಾಗಲಿದೆ.
ಇದಕ್ಕೆ ಸಹಕರಿಸಿದವರು, ಬೆನ್ನು ತಟ್ಟಿದವರು, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು. ಅವರು ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿಯ ಕಾರ್ಯದರ್ಶಿಯಾಗಿದ್ದಾಗ, ನಾನು ರಾಜ್ಯಮಟ್ಟದ ದಿಶಾ ಸಮಿತಿಯ ಸದಸ್ಯನಾಗಿದ್ದಾಗ, ಯೋಜನಾ ಇಲಾಖೆಯೊಂದಿಗೆ ಉಚಿತವಾಗಿ ಎಂ.ಓ.ಯು ಮಾಡಿಕೊಂಡು, ‘ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಸ್ಟಾçಟಜಿ’ ಸಿದ್ಧಪಡಿಸುವ ಯೋಜನೆಗೆ ಪೂರಕವಾಗಿ, ಕನ್ನೇರಿ ಶ್ರೀಗಳ ಮಾರ್ಗದರ್ಶನದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಚಿಸುತ್ತಿರುವ ಕೃಷಿ ಆಶ್ರಮಗಳು, ಮುಂದಿನ ಜವಾಬ್ಧಾರಿ ಪಡೆಯಲು ವೇದಿಕೆ ಸಿದ್ಧಪಡಿಸುವ ಸಂಶೋಧನೆ ಆರಂಭವಾಗಿದೆ.
ನಾನು ನೀಡಿರುವ ಮಧ್ಯಂತರ ವರಧಿ ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಅಂಶಗಳ ಅನುಷ್ಠಾನದ ವರದಿಯೇ, ನನ್ನ ಅಂತಿಮ ಲೈವ್ ಪ್ರಾಜೆಕ್ಟ್/ ವರದಿ ಆಗಲಿದೆ. ಪಾರದರ್ಶಕತೆ ಬಹಳ ಮುಖ್ಯವಾಗಿದೆ. ನಾನು ಸರ್ಕಾರದ ಜೊತೆ ಈಗಾಗಲೇ ನೂರಾರು ಪತ್ರವ್ಯವಹಾರಗಳನ್ನು ಮಾಡಿದ್ದೇನೆ. ಮಾಡುತ್ತಿದ್ದೇನೆ. ಪಲಿತಾಂಶ ಕಾದು ನೋಡೋಣ?
ಶಕ್ತಿಪೀಠ ಕ್ಯಾಂಪಸ್, ಶಕ್ತಿಭವನ, ಶಕ್ತಿಪೀಠ ಡಾಟಾ ಪಾರ್ಕ್ ಉದ್ದೇಶಗಳ ಸಾಧನೆಯೇ ಒಂದು ಸವಾಲಾಗಿದೆ.