27th July 2024
Share

TUMAKURU:SHAKTHI PEETA FOUNDATION

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ರಾಜ್ಯದ 26 ಜಿಲ್ಲೆಗಳ 143 ತಾಲ್ಲೂಕುಗಳಿಗೆ ಸುಮಾರು 1450 ಟಿ.ಎಂ.ಸಿ ಅಡಿ ನೀರಿನ ಯೋಜನೆ ರೂಪಿಸಿ ದಿನಾಂಕ: 01.06.2010 ರಂದು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿ ಪ್ರಕಾರ ಸಮಗ್ರ ಅಭಿವೃದ್ಧಿಗೆ ನೀರಿನ ಬೇಡಿಕೆ.

  1. 15860 ಕೆರೆಗಳಿಗೆ ವರ್ಷದಲ್ಲಿ ಎರಡು ಸಾರಿ ತುಂಬಿಸಲು: 205.20  ಟಿ.ಎಂ.ಸಿ ಅಡಿ ನೀರು.
  2. 15860  ಕೆರೆಗಳ 609777 ಹೆಕ್ಟೆರ್ ಜಮೀನಿಗೆ ನೀರು  : 82.50 ಟಿ.ಎಂ.ಸಿ ಅಡಿ ನೀರು.
  3. ಊರಿಗೊಂದು ಕೆರೆ- ಆಕೆರೆಗೆ ನದಿ ನೀರು ಯೋಜನೆ ಪ್ರಕಾರ ಕೆರೆಗಳಿಲ್ಲದ ಗ್ರಾಮಗಳಲ್ಲಿ ಹೊಸಕೆರೆ ನಿರ್ಮಾಣ : 42.30  ಟಿ.ಎಂ.ಸಿ ಅಡಿ ನೀರು.
  4. ನೀರಾವರಿ ಸೌಲಭ್ಯವಿಲ್ಲದ 65.94  ಲಕ್ಷ ಹೆಕ್ಟೇರ್ ಒಣ ಭೂಮಿಗೆ = 968.00 ಟಿ.ಎಂ.ಸಿ ಅಡಿ ನೀರು.
  5. ಬೆಂಗಳೂರು ನಗರಕ್ಕೆ ಕುಡಿಯುವ ನೀರು  :12.೦೦ ಟಿ.ಎಂ.ಸಿ ಅಡಿ ನೀರು.
  6. ಅರಣ್ಯ ಅಭಿವೃದ್ಧಿಗೆ: 5೦.೦೦ ಟಿ.ಎಂ.ಸಿ ಅಡಿ ನೀರು.
  7. ವಿದ್ಯುತ್ ಸ್ಥಾವರಗಳಿಗೆ:25.೦೦ ಟಿ.ಎಂ.ಸಿ ಅಡಿ ನೀರು.
  8. ಕೈಗಾರಿಕೆಗಳಿಗೆ :6೦.೦೦  ಟಿ.ಎಂ.ಸಿ ಅಡಿ ನೀರು.

ಒಟ್ಟು ಬೇಡಿಕೆ ನೀರು : 1450  ಟಿ.ಎಂ.ಸಿ ಅಡಿ ನೀರು.

ನೀರನ್ನು ಯಾವ ನದಿ ಮೂಲದಿಂದ ಬಳಸಬಹುದು

  1. ಪಶ್ಚಿಮಕ್ಕೆ ಹರಿಯುತ್ತಿರುವ ಹಳ್ಳಗಳ ನೀರು ಗುರುತ್ವಾಕಾರ್ಷಣೆಯಿಂದ : 268 ಟಿ.ಎಂ.ಸಿ ಅಡಿ ನೀರು.
  2. ಪಶ್ಚಿಮಕ್ಕೆ ಹರಿಯುತ್ತಿರುವ ಹಳ್ಳಗಳ ನೀರು ಲಿಫ್ಟ್ : 140  ಟಿ.ಎಂ.ಸಿ ಅಡಿ ನೀರು.
  3. ಕಾವೇರಿ ಪಾತ್ರಗಳಲ್ಲಿನ ಹೆಚ್ಚುವರಿ ನೀರು- ಗ್ರಾವಿಟಿ : 148 ಟಿ.ಎಂ.ಸಿ ಅಡಿ ನೀರು.
  4. ತುಂಗಾಭದ್ರಾ ಪಾತ್ರದಲ್ಲಿನ ಹೆಚ್ಚುವರಿ ನೀರು ಲಿಪ್ಟ್ : 136 ಟಿ.ಎಂ.ಸಿ ಅಡಿ ನೀರು.
  5. ಕೃಷ್ಣ ಜಲಾನಯನ ಪ್ರದೇಶಗಳ ಬಿ. ಸ್ಕೀಂ ನೀರು : 278 ಟಿ.ಎಂ.ಸಿ ಅಡಿ ನೀರು.
  6. ಕಬಿನಿ ನದಿಯಲ್ಲಿನ ಹೆಚ್ಚುವರಿ ನೀರು         : 60 ಟಿ.ಎಂ.ಸಿ ಅಡಿ ನೀರು.
  7. ರಾಷ್ಟ್ರೀಯ ನದಿ ಜೋಡಣೆ ಗೋದಾವರಿ ಮತ್ತು ಮಹಾನದಿ ನೀರು:308  ಟಿ.ಎಂ.ಸಿ ಅಡಿ ನೀರು.
  8. ಸೋರಿಕೆಯಾಗುವ ನೀರು:112 ಟಿ.ಎಂ.ಸಿ ಅಡಿ ನೀರು.

ಒಟ್ಟು ಲಭ್ಯವಾಗುವ ನೀರು : 1450  ಟಿ.ಎಂ.ಸಿ ಅಡಿ ನೀರು.

ಈ ಪುಣ್ಯಾತ್ಮ ಯಾವ ಜಿಲ್ಲೆಯ, ಯಾವ ತಾಲ್ಲೂಕಿಗೆ, ಯಾವ ನದಿ ನೀರು ಕೊಡಬಹುದು ಎಂಬ ಬಗ್ಗೆ ಟೋಪೋಶಿಟ್‌ನಲ್ಲಿ ಗುರುತು ಮಾಡಿ, ಅದೇ ರೀತಿ ಯಾವ ನದಿ ನೀರನ್ನು ಯಾವ ನಂಬರಿನ ಟೀಪೋ ಶೀಟ್ ವ್ಯಾಪ್ತಿಯಲ್ಲಿ ಪಡೆಯ ಬಹುದು ಎಂಬ ಬಗ್ಗೆಯೂ ದಾಖಲಿಸಿದ್ದಾರೆ.

ವರದಿ ಅರ್ಥ ಮಾಡಿಕೊಳ್ಳುವ ಪುಣ್ಯಾತ್ಮ ಯಾರಾದರೂ ಇದ್ದಾರೆಯೇ?

ಇದು ಸರಿಯಾಗಿದೆ ಅಥವಾ ಸರಿಯಾಗಿಲ್ಲ ಎಂದು ಹೇಳುವ ತಾಕತ್ತು ಇರುವವರು ಯಾರಾದರೂ ಇದ್ದಾರೆಯೇ?