TUMAKURU:SHAKTHI PEETA FOUNDATION
![](https://epaper.shakthipeeta.in/wp-content/uploads/2022/12/20221223_125105-1024x577.jpg)
ರಾಜ್ಯದ ಮಾಜಿ ಮುಖ್ಯ ಮಂತ್ರಿ, ಹಿರಿಯ ಮುತ್ಸುದ್ಧಿ, ಐಟಿ-ಬಿಟಿ ಯಲ್ಲಿ ಬೆಂಗಳೂರು ವಿಶ್ವದಲ್ಲಿ ಪ್ರಸಿದ್ಧಿಯಾಗಲು ಕಾರಣೀ ಭೂತರಾದ ಶ್ರೀ ಎಸ್.ಎಂ.ಕೃಷ್ಣರವರಿಗೆ ‘ನಾಗರೀಕ ಸನ್ಮಾನ’ ಮಾಡಲು ಅವರ ಸಮಕಾಲಿನರು, ಹಿತೈಷಿಗಳು, ಸರ್ವಪಕ್ಷಗಳ ನಾಯಕರು ಆಲೋಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಿನಾಂಕ:23.12.2022 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಎಸ್.ಎಂ.ಕೃಷ್ಣರವರು ಮತ್ತು ಶ್ರೀಮತಿ ಪ್ರೇಮ ಕೃಷ್ಣರವರನ್ನು, ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.
![](https://epaper.shakthipeeta.in/wp-content/uploads/2022/12/IMG-20221223-WA0013-1024x472.jpg)
ನಾಗರೀಕ ಸನ್ಮಾನವನ್ನು ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು, ಎಂಬ ಬಗ್ಗೆ ಶೀಘ್ರದಲ್ಲಿ ಆಸಕ್ತ ಎಲ್ಲಾ ವರ್ಗದವರ ಸಭೆ ಕರೆದು ರೂಪುರೇಷೆ ನಿರ್ಧರಿಸಲಾಗುವುದು ಎಂದು ಜಿ.ಎಸ್.ಬಸವರಾಜ್ ರವರು ತಿಳಿಸಿದ್ದಾರೆ.