TUMAKURU:SHAKTHIPEETA FOUNDATION
ಶ್ರೀ ಸಿದ್ಧರಾಮಯ್ಯನವರು, ಶ್ರೀ ಡಿ.ಕೆ.ಶಿವಕುಮಾರ್ ರವರು ಮತ್ತು ನೂತನ ಸರ್ಕಾರದ ಪ್ರತಿಯೊಬ್ಬರಿಗೂ ನಾಡಿನ ಜನತೆಯ ಪರವಾಗಿ ಅಭಿನಂದನೆಗಳು.
![](https://epaper.shakthipeeta.in/wp-content/uploads/2023/05/IMG-20230519-WA0001.jpg)
ಕರ್ನಾಟಕದ ಬಹುತೇಕ ಜನತೆ ಈ ಭಾರಿ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ ಗ್ಯಾರಂಟಿಯೇ ಈ ಕಾತುರತೆಗೆ ಮೂಲ.
ಬಹುತೇಕ ಎಲ್ಲರೂ ಸಾಲದ ಮುಖ್ಯಮಂತ್ರಿಗಳೇ? ಇದೂವರೆಗೂ ರಾಜ್ಯವನ್ನು ಆಳಿದ ಅವಧಿವಾರು ಯಾವ ಮುಖ್ಯ ಮಂತ್ರಿಯವರು ಎಷ್ಟೆಷ್ಟು ಸಾಲ ಮಾಡಿದ್ದಾರೆ. ಈ ಸಾಲ ತೀರಿಸಲು ಕೈಗೊಳ್ಳುವ ಕ್ರಮಗಳೇನು ಮತ್ತು ಹೊಸ ಸಾಲಕ್ಕೆ ಯಾವ ರೀತಿ ಕಡಿವಾಣ ಹಾಕಲಾಗುವುದು ಎಂಬ ಬಗ್ಗೆ ಮುಖ್ಯ ಮಂತ್ರಿಯಾಗುವ ಹಾಗೂ ಸ್ವತಃ ಆರ್ಥಿಕ ತಜ್ಞರಾಗಿರುವ ಶ್ರೀ ಸಿದ್ಧರಾಮಯ್ಯನವರು ಪ್ರಥಮ ಸಚಿವ ಸಂಪುಟದಲ್ಲಿಯೇ ಪಾರದರ್ಶಕವಾಗಿ ಸ್ಪಷ್ಟ ಪಡಿಸಬೇಕು.
![](https://epaper.shakthipeeta.in/wp-content/uploads/2023/05/CM-LIST-680x1024.jpg)
ಟೀಕೆ ಟಿಪ್ಪಣೆ ಮಾಡುವ ಬದಲು, ಇದೂವರೆಗೂ ರಾಜ್ಯವನ್ನು ಆಳಿರುವ ಮಾಜಿ ಮುಖ್ಯಂತ್ರಿಗಳು ಅವರವರ ಹಾಗೂ ಪಕ್ಷವಾರು ಸಾಲದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮತದಾರರಿಗೆ ತಿಳಿಸುವುದು ಸೂಕ್ತ.
ಕರ್ನಾಟಕ @ 100 ಅಂಗವಾಗಿ, ಮುಂದಿನ 25 ವರ್ಷಗಳಿಗೆ ಅಡಿಪಾಯ ಹಾಕುವ ಸುಭದ್ರ ಸರ್ಕಾರ ಇದಾಗಬೇಕಿದೆ. ‘ಟಗರು ಬಲ’ ಕರ್ನಾಟಕಕ್ಕೆ ವರದಾನಬಾಗಬೇಕಿದೆ. ಅವರ ಆಡಳಿತ ಶೈಲಿಯ ಅವಲೋಕನ ರಾಜ್ಯದ ಮತದಾರರ ಕರ್ತವ್ಯವೂ ಹೌದು!