11th February 2026
Share

TUMAKURU:SHAKTHIPEETA FOUNDATION

 ಸಂಸದರ ಆದರ್ಶ ಗ್ರಾಮದ ನೋಡೆಲ್ ಆಫೀಸರ್ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀ ರಮೇಶ್‌ರವರೇ ಆಕ್ಷನ್ ಪ್ಲಾನ್‌ಗೆ ಇದೂವರೆಗೂ ಏಕೆ ಅನುಮೋದನೆ ನೀಡಿಲ್ಲ, ಯಾವುದಾದರೂ ಅಡಚಣೆಯಿದೆಯೇ?

  1. ಸಂಸದರು ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಲು ಪತ್ರ ನೀಡಿದ್ದು ಯಾವ ದಿನಾಂಕ.
  2. ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿದ್ದು ಯಾವ ದಿನಾಂಕ.
  3. ನೋಡೆಲ್ ಆಫಿಸರ್ ನೇಮಕ ಮಾಡಿದ್ದು ಯಾವ ದಿನಾಂಕ.
  4. ಸಂಸದರು ಮಾರಶೆಟ್ಟಿಹಳ್ಳಿಯಲ್ಲಿ ಪ್ರಥಮ ಸಭೆ ನಡೆಸಿದ್ದು ಯಾವ ದಿನಾಂಕ.
  5. ಸಂಸದರು ಗುಬ್ಬಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದು ಯಾವ ದಿನಾಂಕ.
  6. ಗುಬ್ಬಿ ಇಓರವರು ಸಿಐಟಿಯ ಜೊತೆ ಸಭೆ ನಡೆಸಿ, ಆಕ್ಟಿವಿಟಿ ಪಾಯಿಂಟ್ಸ್‌ಗಾಗಿ ವಿಧ್ಯಾರ್ಥಿಗಳನ್ನು ಬಳಸಿಕೊಳ್ಳಲು ಸಭೆ ನಡೆಸಿದ್ದು ಯಾವ ದಿನಾಂಕ.
  7. ಮಾರಶೆಟ್ಟಿಹಳ್ಳಿ ಪಿಡಿಓ ಗುಬ್ಬಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಆಕ್ಷನ್ ಪ್ಲಾನ್ ಸಲ್ಲಿಸಿದ್ದು ಯಾವ ದಿನಾಂಕ.
  8. ಗುಬ್ಬಿ ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ತಮಗೆ ಆಕ್ಷನ್ ಪ್ಲಾನ್ ಸಲ್ಲಿಸಿದ್ದು ಯಾವ ದಿನಾಂಕ.
  9. ನಾನು ನಿಮಗೆ, ಇಓ ರವರಿಗೆ ಮತ್ತು ಪಿಡಿಓ ರವರಿಗೆ ಎಷ್ಟು ಬಾರಿ ದೂರವಾಣಿ ಕರೆಮಾಡಿರುವುದು.

ನೀವೇ ಕುಳಿತು ಮೌನವಾಗಿ ಯೋಚಿಸಿ ನೋಡಿ, ಈ ರೀತಿ ಆದರೆ ಒಂದು ಕೋಟಿ ಜನ ನರೇಂದ್ರ ಮೋದಿಯವರಂತೆ ಆದರೂ ಯೋಜನೆ ಅನುಷ್ಠಾನ ಸಾಧ್ಯವೇ?