20th April 2024
Share

ದಿನಾಂಕ : 12.12.2021 ರಿಂದ 23.12.2021 ಸುಮಾರು ಹನ್ನೆರಡು ದಿವಸಗಳ ಅಭಿವೃದ್ದಿ ದೆಹಲಿ ಪ್ರವಾಸ ಫಲಪ್ರದವಾಗಿದೆ.

ದೆಹಲಿಯಲ್ಲಿ ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ ಎಸ್ ಬಸವರಾಜ್ ಅವರ ಮನೆಯಲ್ಲಿ ರಾಜಾತಿಥ್ಯ ನಡೆಯಿತು.

ತುಮಕೂರಿನಿಂದ ದೆಹಲಿವರೆಗೆ ಮಾಡಿದ ಪ್ರವಾಸದ ಎಲ್ಲಾ ಖರ್ಚುವೆಚ್ಚಗಳನ್ನು ಜಿ. ಎಸ್ ಬಸವರಾಜ್ ಅವರೇ ಭರಿಸಿದ್ದಾರೆ.

ಟಿ.ಆರ್. ರಘೋತ್ತಮರಾವ್ ಮತ್ತು ನಾನು 2 ಸಲ ಕರ್ನಾಟಕ ಭವನಕ್ಕೆ ಓಡಾಡಿದ ಪ್ರವಾಸದ ವೆಚ್ಚವನ್ನು ಮಾತ್ರ ಭರಿಸಲಾಗಿದೆ.

ವಿವಿಧ ಕಚೇರಿಗಳಲ್ಲಿ, ವಿವಿಧ ಯೋಜನೆಗಳ ಕಡತಗಳನ್ನು ಅನುಸರಣೆ ಮಾಡುವುದರ ಜೊತೆಗೆ,ಕರ್ನಾಟಕ ಸರ್ಕಾರದ ಯೋಜನಾ ಇಲಾಖೆ ಮತ್ತು ದೆಹಲಿಯಲ್ಲಿರುವ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಜೊತೆ ನಡೆಸಿದ ಸಮಾಲೋಚನೆ ತೃಪ್ತಿ ತಂದಿದೆ.

ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಪಡೆಯಲು, ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ

Centre of Excellence- Capturing GOI funds

ಆರಂಭಿಸುವ ಚಿಂತನೆಗೆ ಮೊಳಕೆ ಒಡೆದಿದೆ.

ಈ ಬಗ್ಗೆ ಹನ್ನೆರಡು ದಿವಸಗಳು ಸಹ ಕೂಲಂಕುಷವಾಗಿ ಚರ್ಚೆ ನಡೆದಿದೆ.ತಾವುಗಳು ಸಹ ಅಮೂಲ್ಯವಾದ ಸಲಹೆಗಳನ್ನು ನೀಡಲು ಈ ಮೂಲಕ ಮನವಿ