28th March 2024
Share
G.S.BASVARAJ, ANILKUMAR & KUNDARNAHALLI RAMESH

TUMAKURU:SHAKTHI PEETA FOUNDATION

 ಜಲಸಂಪನ್ಮೂಲ ಇಲಾಖೆಯ ಉನ್ನತ ಸ್ಥಾನದಲ್ಲಿರುವ ಎಲ್ಲಾ ಬುದ್ದಿವಂತ ಇಂಜಿನಿಯರ್‌ಗಳ ಪರಸ್ಪರ ಅಸೂಯೆಯಿಂದ ನೀರಾವರಿ ಯೋಜನೆಗಳು ಕುಂಟಿತವಾಗಿವೆ ಇದರಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿ ಹೊಳೆರವರಿಗೆ ಕೆಟ್ಟ ಹೆಸರು ಬರಲಿದೆ.

 ಬೃಹತ್ ನೀರಾವರಿ ಯೋಜನೆಗಳಿಗೆ ಹಣದ ಕೊರತೆಯಿದೆ, ಆದರೇ ಸಂಪೂರ್ಣವಾಗಿ ನೀರಿನ ಮಾಸ್ಟರ್ ಪ್ಲಾನ್ ಮಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಸಾಮಾಜಿಕ ನ್ಯಾಯದಡಿಯಲ್ಲಿ ದೊರೆಯಬಹುದಾದ ನದಿ ನೀರಿನ ಹಂಚಿಕೆ ಮಾಡಲು ನಿಮಗೆಲ್ಲಾ ಎನಾಗಿದೆ ಎಂದು ಇಲಾಖೆಗೆ ಹೊಸದಾಗಿ ನೇಮಕವಾಗಿರುವ ಕಾರ್ಯದರ್ಶಿ ಶ್ರೀ ಅನಿಲ್‌ಕುಮಾರ್ ರವರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ನೇರವಾಗಿ ಪ್ರಶ್ನಿಸಿದರು.

 ಅನಿಲ್‌ಕುಮಾರ್‌ರವರು ಪ್ರತಿಕ್ರಿಯೇ ನೀಡಿ ತಮ್ಮ ಕಾಳಜಿ ನನಗೆ ಗೊತ್ತಿದೆ ಸಾರ್, ಒಂದು ವರ್ಷದಲ್ಲಿ ನಾವು ರಾಜ್ಯದಲ್ಲಿ ದೊರೆಯುವ ಮತ್ತು ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ರಾಜ್ಯಕ್ಕೆ ದೊರೆಯುವ ನೀರಿನಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಸಾಮಾಜಿಕ ನ್ಯಾಯದಡಿ ಹಂಚಿಕೆ ಮಾಡಿ ಇದೂವರೆಗೂ ಅನ್ಯಾಯವಾಗಿರುವ ಭಾಗಕ್ಕೆ ನ್ಯಾಯದೊಕಿಸಿಯೇ ತೀರುತ್ತೇವೆ.

 ತಾವು ಮಾನ್ಯ ಮುಖ್ಯ ಮಂತ್ರಿಗಳಿಂದ  ಆದೇಶಿರುವ ಪತ್ರಗಳು ನಮ್ಮ ಬಳಿ ಇವೆ, ಜಲಸಂಪನ್ಮೂಲ ಸಚಿವರಿಗೂ ವಿಶೇಷ ಕಾಳಜಿ ಇದೆ, ನಾವೆಲ್ಲರೂ ಸಮರೋಪಾದಿಯಲ್ಲಿ ಕಾರ್ಯೋನ್ಮುಖ ರಾಗುತ್ತೇವೆ, ಆದರೇ ?

 ಎಂದಾಗ ಮಧ್ಯೆ ಪ್ರವೇಶಿಸಿದ ಕುಂದರನಹಳ್ಳಿ ರಮೇಶ್ ರಾಜ್ಯದಲ್ಲಿ 28 ಜನ ಲೋಕಸಭಾ ಸದಸ್ಯರು ಇದ್ದಾರೆ. 12 ಜನ ರಾಜ್ಯಸಭಾ ಸದಸ್ಯರು ಇದ್ದಾರೆ. ಬಹುತೇಕ ಮಂದಿ ಬಿಜೆಪಿಯವರು ಇದ್ದಾರೆ, ಆದರೇ ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ರಾಜ್ಯದ ನೀರಾವರಿ ಯೋಜನೆಗಳಿಗೆ ಪಕ್ಷಾತೀತವಾಗಿ ಸಂಸದರು ಒಗ್ಗಟ್ಟಾಗಿ ಏಕೆ ಶ್ರಮಿಸುತ್ತಿಲ್ಲ.

 ಭದ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆ ಯೋಜನೆಯನ್ನು ಎನ್.ಪಿ.ಪಿ ಯೋಜನೆಯಾಗಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿ ಎಷ್ಟು ವರ್ಷವಾಯಿತು. ಮೇಕೆದಾಟು ಯೋಜನೆ, ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ, ವಿವಿಧ ನದಿ ಜೋಡಣೆಗಳಿಂದ ರಾಜ್ಯದ ಪಾಲಿನ ನೀರಿನ ಹಂಚಿಕೆ ಹೀಗೆ ಬಹುತೇಕ ಎಲ್ಲಾ ಯೋಜನೆಗಳ ಕಡತಗಳು ಧೂಳು ತಿನ್ನುತ್ತಿವೆ ಎಂದಾಗ,

 ಮಧ್ಯೆ ಪ್ರವೇಶಿದ ಸಂಸದರು ರಾಜ್ಯ ಜಲಸಂಪನ್ಮೂಲ ಸಚಿವರು ಮತ್ತು ಕೇಂದ್ರದ ಜಲಶಕ್ತಿ ಸಚಿವರು ಸಹ ವಿಶೇಷ ಕಾಳಜಿಯುಳ್ಳವರಾಗಿದ್ದಾರೆ. ನಾವೆಲ್ಲರೂ ಪಕ್ಷಾತೀತವಾಗಿ ಶ್ರಮಿಸಲು ಮುಂದಾಗುತ್ತೇವೆ. ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರ ನೇತೃತ್ವದಲ್ಲಿ ಕಾಂಗ್ರೇಸ್‌ನ ಶ್ರೀ ಮಲ್ಲಿಕಾರ್ಜುನ ಖರ್ಗೆರವರು ಮತ್ತು ಅವರ ಪಕ್ಷದವರು ಮತ್ತು ಜನತಾದಳದ ಶ್ರೀ ಹೆಚ್.ಡಿ.ದೇವೆಗೌಡರವರು ಮತ್ತು ಅವರ ಪಕ್ಷದವರು ಸೇರಿ ಒಟ್ಟಿಗೆ ಕುಳಿತು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡೀಯೂಪ್ಪನವರು, ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯದ ಜನತೆ ಒಪ್ಪುವ ಕೆಲಸ ಮಾಡುತ್ತೇವೆ.

 ಮೋದಿಜಿಯವರು ಒಪ್ಪುವಂತ ಅತ್ಯುತ್ತಮವಾದ ಯೋಜನೆಯನ್ನು  ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್‌ಸಿಂಗ್‌ರವರು ಮತ್ತು ತಾವುಗಳೆಲ್ಲರೂ ಕುಳಿತು ರೂಪಿಸಿ ಎಂದು ಸಲಹೆ ನೀಡಿದರು.

 ಒಟ್ಟಿನಲ್ಲಿ ನೀರಾವರಿ ಬಗ್ಗೆ ಬಿಸಿ, ಬಿಸಿ ಚರ್ಚೆ ನಡೆಯಿತು ಪಲಿತಾಂಶ ಕಾದು ನೋಡಬೇಕಿದೆ. ಮುಂಗುಸಿ- ಹಾವಿನಂತೆ ದ್ವೇಷ ಸಾಧಿಸುವ ರೀತಿ ಯಾರಿಗೂ ಒಳ್ಳೆಯದಲ್ಲ. ಇರುವ ಬುದ್ದಿವಂತರೆಲ್ಲಾ ಸಮಾನ ಮನಸ್ಕರಾದರೆ ಮಾತ್ರ ಉತ್ತಮ ಯೋಜನೆ ನೀಡಲು ಸಾಧ್ಯ. ಇದೇ ರೀತಿ ಮುಂದುವರೆದರೆ ತಂದೆ ತಾಯಿ ಜಗಳದಲ್ಲಿ ಮಕ್ಕಳು ಬಡವಾದಂತೆ ಆಗುವುದು ಬೇಡ.