27th July 2024
Share
G.S.BASAVARAJ. ANILKUMAR & KUNDARANAHALLI RAMESH

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ:09.11.2020 ಇಂದಿಗೆ 9  ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-8  ದಿನಾಂಕ: 17.11.2020

  ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯವರಾದ  ಶ್ರೀ ಅನಿಲ್ ಕುಮಾರ್ ರವರೊಂದಿಗೆ ರಾಜ್ಯದ ನದಿ ಜೋಡಣೆ’ ಮತ್ತು ’ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

 ದಿನಾಂಕ: 17.11.2020 ರಂದು ಅವರ ಕಚೇರಿಗೆ ತೆರಳಿದ ಶ್ರೀ ಜಿ.ಎಸ್.ಬಸವರಾಜ್‌ರವರು  ಶೀಘ್ರವಾಗಿ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿದರು. ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಯವರಾದ  ಶ್ರೀ ರಾಕೇಶ್‌ಸಿಂಗ್ ರವರಿಂದ ನಮಗೆ ಆದೇಶದ ಪ್ರತಿ ಬಂದಿದೆ. ನಾವು ಶೀಘ್ರವಾಗಿ ಉನ್ನತ ಅಧಿಕಾರಗಳ ಮಟ್ಟದ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

 ರಾಜ್ಯದಲ್ಲಿ ನಾಲ್ಕು ನೀರಾವರಿ ನಿಗಮಗಳು ಇವೆ, ಒಂದು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಇದೆ, ರಾಜ್ಯ ಮಟ್ಟದಲ್ಲಿ ಡಿಪಿಆರ್ ಮಾಡಲು ಯಾವ ಇಲಾಖೆಯ ಮುಖಾಂತರ ಟೆಂಡರ್ ಕರೆಯಬೇಕು. ಯಾವ ವಿಚಾರಗಳು ಪ್ರಸ್ತಾವನೆಯಲ್ಲಿರಬೇಕು ಹಾಗೂ ಕೇಂದ್ರ ಸರ್ಕಾರಕ್ಕೆ ಡಿಪಿಆರ್ ಮಾಡಲು ಸೂಚಿಸಬೇಕೋ ಅಥವಾ ರಾಜ್ಯ ಸರ್ಕಾರ ಡಿಪಿಆರ್ ಮಾಡಬೇಕೋ ಎಂಬ ಬಗ್ಗೆ ಸಮಾಲೋಚನೆ ನಡೆಸಿ, ನಂತರ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

 ಶ್ರೀ ಜಿ.ಎಸ್.ಬಸವರಾಜ್‌ರವರು ಮಾತನಾಡಿ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರಿಗೆ ದೂರವಾಣಿ ಮುಖಾಂತರ ಈಗಾಗಲೇ ಮಾತನಾಡಿದ್ದೇನೆ. ಹಿಂದೆ ಜಿ.ಎಸ್.ಪರಮಶಿವಯ್ಯನವರ ವರದಿ ಡಿಪಿಆರ್ ಮಾಡಲು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗೆ ವಹಿಸಲಾಗಿತ್ತು.

ಅವರ ಬಳಿ ಹಣವಿಲ್ಲದೆ ಇದ್ದುದರಿಂದ ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮ ಮತ್ತು ಕಾವೇರಿ ನೀರಾವರಿ ಅಭಿವೃದ್ಧಿ ನಿಗಮಗಳೆರಡು ಹಣ ಪಾವತಿಸಿ ಡಿಪಿಆರ್ ಅನ್ನು ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮ ಮಾಡಿರುವ ಬಗ್ಗೆಯೂ ಚರ್ಚಿಸಿದರು.

ಈ ಯೋಜನೆ ಡಿಪಿಆರ್ ಮಾಡಲು

  1. ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮ
  2. ಕಾವೇರಿ ನೀರಾವರಿ ಅಭಿವೃದ್ಧಿ ನಿಗಮ.
  3. ವಿಶ್ವೇಶ್ವರಯ್ಯ ಜಲಭಾಗ್ಯ ನೀರಾವರಿ ಅಭಿವೃದ್ಧಿ ನಿಗಮ.

ಈ ಮೂರು ನಿಗಮಗಳು ವಿಶೇಷ ಆಸಕ್ತಿ ವಹಿಸಿವೆ, ನಾವೂ ಇದೂವರೆಗೂ ಕೃಷ್ಣ ಜಲಭಾಗ್ಯ ನೀರಾವರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಮಾಲೋಚನೆ ಮಾಡಿಲ್ಲ.