25th April 2024
Share
SREE MADHUSUDHAN SAI, G.S.BASAVARAJ, NARASIMHAMURTHY, MANJUNATH, GURUSIDDAPPA & KUNDARANAHALLI RAMESH

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 11 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-10 ದಿನಾಂಕ: 21.11.2020

  ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು  ಯೋಜನೆ ಡಿಪಿಆರ್ ಮಾಡಲು  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ಮಾಡಿರುವ ಬಗ್ಗೆ ಮುದ್ದೇನಹಳ್ಳಿ ಸಾಯಿಗ್ರಾಮದಲ್ಲಿ ಶ್ರೀ ಮಧುಸೂಧನ್ ಸಾಯಿರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

 ದಿನಾಂಕ:18.11.2020 ರಂದು ಸಾಯಿಗ್ರಾಮದಲ್ಲಿ ಬಹಳ ಅರ್ಥಪೂರ್ಣವಾಗಿ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಚಿಂತನೆ ನಡೆಸಲಾಯಿತು. ಶ್ರೀಗಳು ಈ ಯೋಜನೆ ಖಂಡಿತ ಆಗಲಿದೆ. ಬಾಬಾರವರ ಅನುಗ್ರಹವಿದೆ. ಶ್ರೀ ಜಿ.ಎಸ್.ಬಸವರಾಜ್ ರವರಿಗೆ ತಾವೂ ನಿರಂತರವಾಗಿ ಪ್ರಯತ್ನಿಸಿ ಎಂದು ಆಶಿರ್ವಾದ  ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ನರಸಿಂಹಮೂರ್ತಿಯವರು, ಶ್ರೀ ಡಾ.ಎ.ಆರ್.ಮಂಜುನಾಥ್‌ರವರು, ಶ್ರೀ ಸಾಯಿ ಗುರುಸಿದ್ದಪ್ಪನವರು ಇದ್ದರು.