11th February 2026
Share

TUMAKURU:SHAKTHIPEETA FOUNDATION

ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಗಮನ ಸೆಳೆಯಲು ರಾಜ್ಯಾಧ್ಯಾಂತ ಹಲವಾರು ಜನರು ಮತ್ತು ಸಂಘ ಸಂಸ್ಥೆಗಳು ಈ ಕೆಳಕಂಡ ವಿಚಾರಗಳ ಬಗ್ಗೆ ನನ್ನೋಡನೆ ಸಮಾಲೋಚನೆ ನಡೆಸಿದ್ದಾರೆ.

ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರುಗಳು ಸೇರಿದಂತೆ ರಾಜ್ಯದ ಎಲ್ಲಾ 40 ಜನ ಸಂಸದರ ಗಮನಕ್ಕೂ ತರುವುದು ಅಗತ್ಯವಾಗಿದೆ. ಬಿಜೆಪಿ ಪಕ್ಷದಲ್ಲಿ ರಾಜ್ಯದ ಪದಾಧಿಕಾರಿಯವರಾದ ಶ್ರೀ ಬಿ.ಎಲ್ ಸಂತೋಷ್ ರವರು ಮತ್ತು ಅವರ ತಂಡದ ಗಮನ ಸೆಳೆಯ ಬೇಕಿದೆ. ಇನ್ನೂ ಯಾವುದಾದರೂ ಯೋಜನೆಗಳ ಬಗ್ಗೆ ಗಮನ ಸೆಳೆಯ ಬೇಕಿದ್ದಲ್ಲಿ ಆಸಕ್ತರು ಮಾಹಿತಿ ನೀಡಬಹುದಾಗಿದೆ. 

  1. ಗೊಲ್ಲ ಸಮುದಾಯಕ್ಕೆ ಮೀಸಲಾತಿ.
  2. ಸದಾಶಿವ ಆಯೋಗ ವರದಿ ಜಾರಿ.
  3. ಕುಂಚಿಟಿಗ ಸಮುದಾಯಕ್ಕೆ ಮೀಸಲಾತಿ.
  4. ಕುರುಬ ಸಮುದಾಯಕ್ಕೆ ಮೀಸಲಾತಿ.
  5. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ.
  6. ಭದ್ರ ಮೇಲ್ಧಂಡೆ ರಾಷ್ಟ್ರೀಯ ಯೋಜನೆ.
  7. ಎತ್ತಿನಹೊಳೆ ರಾಷ್ಟ್ರೀಯ ಯೋಜನೆ.
  8. ರಾಷ್ಟ್ರೀಯ ಇನ್ಪಾಸ್ರಚ್ಚರ್ ಪೈಪ್ ಲೈನ್ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಆಗುವ ಅನೂಕೂಲ.
  9. ಗತಿಶಕ್ತಿ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಆಗುವ ಅನೂಕೂಲ.
  10. ಪ್ರವಾಹ ಪೀಡಿತ ಪ್ರದೇಶಕ್ಕೆ ಹೆಚ್ಚಿನ ಅನುದಾನ.
  11. ಜಿಲ್ಲಾ ಮಟ್ಟದ ದಿಶಾ ಸಮಿತಿ ಬದಲಾಗಿ-ಲೋಕಸಭಾ ಕ್ಷೇತ್ರಕ್ಕೊಂದು ದಿಶಾ ಸಮಿತಿ.
  12. ಅಟಲ್ ಭೂಜಲ್ ಯೋಜನೆಯಲ್ಲಿ ವಾಟರ್ ಆಡಿಟ್‍ಗೆ ಕರಾಬುಹಳ್ಳ ಮತ್ತು ಪಿಕ್ ಅಫ್ ಗಳ ಸೇರ್ಪಡೆ.
  13. ಕೆರೆಗಳಿಗೆ ನದಿ ನೀರು ಸಣ್ಣ ನೀರಾವರಿ ಇಲಾಖೆ ಪ್ರಸ್ತಾವನೆ.
  14. ತುಮಕೂರು ಹೆಚ್.ಎ.ಎಲ್ ಹೆಲಿಕ್ಯಾಪ್ಟರ್ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ.
  15. ಸ್ಮಾರ್ಟ್ ಸಿಟಿ ಯೋಜನೆ ಮುಂದಿನ ನಿರ್ಧಾರ.
  16. ಮೇಕೆದಾಟು ಯೋಜನೆ.
  17. ರಾಷ್ಟ್ರೀಯ ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ಆಗುವ ಅನೂಕೂಲ.
  18. ಹಿರೇ ವಡ್ಡಹಟ್ಟಿ ಯೋಜನೆ.
  19. ರಾಜ್ಯಕ್ಕೆ ಮೆಗಾ ಟೆಕ್ಟ್ ಟೈಲ್ ಪಾರ್ಕ್.
  20. ರಾಜ್ಯಕ್ಕೆ ಖೇಲೋ ಇಂಡಿಯಾ ಕ್ರೀಡಾ ಗ್ರಾಮ.
  21. ರಾಜ್ಯಕ್ಕೆ ಡಿಫೆನ್ಸ್ ಕಾರಿಡಾರ್.
  22. ರಾಜ್ಯಕ್ಕೆ ಎಸ್.ಡಿ.ಎಂ ಕ್ಲಸ್ಟರ್.
  23. ನಾಶವಾಗುತ್ತಿರುವ ತೆಂಗಿನ ಮರಗಳಿಗೆ ಪರಿಹಾರ.
  24. ಕೊರಟಗೆರೆ ಪೋಲಿಸ್ ಬೆಟಾಲಿಯನ್ ಅನುದಾನ ಮಂಜೂರಾತಿ
  25. ರಾಜ್ಯದ ರೈಲ್ವೇ ಯೋಜನೆ.
  26. ರಾಜ್ಯದ ರಾಷ್ಟ್ರೀಯ ಹೆದ್ಧಾರಿ ಯೋಜನೆ.
  27. ರಾಜ್ಯಕ್ಕೆ ಮೆಡಿಕಲ್ ಡಿವೈಸ್ ಪಾರ್ಕ್.
  28. ನೆನೆಗುದಿಗೆ ಬಿದ್ದಿರುವ ಗಣಿ ಅನುದಾನ.
  29. ರಾಜ್ಯಕ್ಕೆ ಫಾರಂ ಮೆಷಿನರಿ & ಟ್ರೈನಿಂಗ್ ಇನ್ ಸ್ಟೂಟ್.
  30. ರಾಜ್ಯಕ್ಕೆ ಸೈನಿಕ ಶಾಲೆ.
  31. ತುಮಕೂರು ಏರ್ ಪೋರ್ಟ್.
  32. 40 ಜನ ಸಂಸದರ ಚಿಂತನೆಗಳ ಮಾಹಿತಿಯನ್ನು ಕ್ರೋಡಿಕರಿಸಲಾಗುವುದು.
  33. ಕೇಂದ್ರ ಸರ್ಕಾರದಲ್ಲಿ ನನೆಗುದಿಗೆ ಬಿದ್ದಿರುವ ರಾಜ್ಯದ ಇತರೆ ಯೋಜನೆಗಳ ಬಗ್ಗೆ ರೆಸಿಡೆಂಟ್ ಕಮೀಷನರ್ ರವರಿಂದ ಮಾಹಿತಿ ಪಡೆಯಲಾಗುವುದು.