26th July 2024
Share
B.S.YADIYURAPPA, SURESHPRABHU, MADHUSUDHAN & KUNDARANAHALLI RAMESH

TUMAKURU:SHAKTHIPEETA FOUNDATION

ಬೆಂಗಳೂರು ರೀಜನ್ ಇಂಡಸ್ಟ್ರಿಯಲ್ ರೈಲ್ ಕಾರಿಡಾರ್ ನಿರ್ಮಾಣ -ಕೈಗಾರಿಕಾ ವಸಹಾತುಗಳು ಜೋಡನೆ ಜೊತೆಗೆ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ ನಿರ್ಮಾಣ [BRIRC] -ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗೆ ಪೂರಕ. 

       ಕೈಗಾರಿಕಾ ವಸಹಾತು ದೇಶದಲ್ಲಿನ ಔದ್ಯೋಮಿಕ ಚಟುವಟುಕೆ/ಸದರಿ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ ಕಂಡುಕೊಳ್ಳಲು ಕೈಗಾರಿಕೆಗಳಿಗೆ ಅತ್ಯಾವಶ್ಯಕವಾದ ಕಚ್ಚಾವಸ್ತು-ನುರಿತ ಮಾನವ ಸಂಪನ್ಮೂಲ ಸರಬರಾಜು ಮತ್ತ್ಲು ತಡೆರಹಿತ-ವೇಗದಸಾರಿಗೆ  ಸೌಕರ್ಯಗಳು ಮೂಲಾಧಾರವಾಗಿದೆ. ನೆಲಸಾರಿಗೆ ವ್ಯವಸ್ಥೆ ಅವರಣದಲ್ಲಿ ರೈಲು ಸಾರಿಗೆ ಸಮೂಹ ತ್ವರಿತ ಸಾಗಾಣಿಕೆ ವ್ಯವಸ್ಥೆ ಅದಕ್ಕೆಲಗತ್ತಾಗಿ ಕೈಗಾರಿಕಾ ಹಬ್ ಗಳುಹೊಂದಿದ್ದರೆ , ರಸ್ತೆ ಮೇಲಿನ ಹೊರೆ ಇಳಿಸುವ ಜೊತೆಗೆ ವಾತಾವರಣಕ್ಕೆ ಕಾರ್ಬನ್ ಹೊರಸೂಸುವ ಅಂಶ ಸಹಾ ಕಡಿಮೆಗೆ ಕಾರಣವಾಗುತ್ತದೆ ಮತ್ತು ಕೈಗಾರಿಕೆಗಳಿಗೆ ಕಡಿಮೆಬೆಲೆಯ ಸಪ್ಲೆ ಚೈನ್ ಅಗಿರುತ್ತದೆ. ಇದರಿಂದ ಉತ್ಪಾದನಾವೆಚ್ಚ ಕಡಿಮೆಯಾಗಿ ನಮ್ಮವಸ್ತುಗಳು ಬೆಲೆಕಡಿಮೆಯಾಗಿ ಜಾಗತಿಕ ಬೆಲೆ ಪಟ್ಟಿ ಸವಾಲ್ ಗಳಿಗೆ ಸರಿಸಾಟಿಯಾಗಿ ನಿಲ್ಲಲು ಸಹಾಯವಾಗಿ   ರಪ್ತು ಬೆಳವಣಿಗೆ ಅಂಶ ಕಂಡುಬರುವುದು.

                ಬೆಂಗಳೂರು ನಗರದ ಸುತ್ತಮುತ್ತ ಹಾಗೂ ಅದರ ಪಡಸಾಲೆ ಜಿಲ್ಲೆಗಳಲ್ಲಿ ಹಲವಾರು ಕೈಗಾರಿಕಾ ವಸಹಾತು ಪಸರಿಸಿದೆ ಮತ್ತುರೈಲು ದ್ವಿಪಥ ಮಾರ್ಗ, ಮೂಲಭೂತ ಸೌಕರ್ಯವಿದೆ. ಆದರೆ  ಒಂದಕ್ಕೊಂದು ಸಂಪರ್ಕ್‌ಹೊಂದಲು ಬೆಂಗಳೂರು ನಗರ ಮೂಲಕವೇ  ಚಲಿಸಬೇಕು, ಇದರಿಂದ ನಗರದ ರೈಲ್ವೆ ಟರ್ಮಿನಲ್ ಗಳಲ್ಲಿ ಹೆಚ್ಚಿನ ಒತ್ತಡವಾಗಿದೆ.

  ಬೆಂಗಳೂರು ಸುತ್ತಮುತ್ತದ  ಕೈಗಾರಿಕಾ ವಸಹಾತುಗಳಿಗೆ ರೈಲು ಸಂಪರ್ಕ ನಿರ್ಮಾಣ- ಪರಿಕಲ್ಪನೆಯ ಮೂಲಕ  ಒಂದಕ್ಕೊಂದು ಕೈಗಾರಿಕಾ ವಸಹಾತುUಳು ಜೋಡಿಸುವ ಕೊಂಡಿಯಾಗುವ ಬೆಂಗಳೂರು ರೀಜನ್ ಇಂಡಸ್ಟ್ರಿಯಲ್ ರೈಲ್ ಕಾರಿಡಾರ್ ಪರಿಕಲ್ಪನೆ ಅಡಿ ನಿರ್ಮಾಣದ ಅಗತ್ಯತೆ ಇದೆ.- ಇದು ವೇಗದ ತಡೆರಹಿತ ಸಪ್ಲೆಚೈನ್ ಆಗಿ ಮುಂದೆ ಕರ್ನಾಟದ ಬಂದರುಗಳಾದ ನವಮಂಗಳೂರು ಹಾಗೂ ಭವಿಷ್ಯದ ತದಡಿ ಬಂದರುಗಳಿಗೆ ಕಂಟೈನರ್ ಮೂಲಕ ರಪ್ತುಮಾಡಲು ಸಹಾ ಅವಕಾಶವಾಗುತ್ತದೆ. ಮತ್ತು ನುರಿತ ಮಾನವ ಸಂಪನ್ಮೂಲ ಯಾವುದೇ ಭಾಗದಿಂದ ಕೈಗಾರಿಕಾ ಪ್ರದೇಶಕ್ಕೆ ತಡೆರಹಿತ ಚಲಿಸಲು ಅವಕಾಶವಾಗುತ್ತದೆ. ಇದರಿಂದ ರಸ್ತೆ ಮೂಲಕ ಸಾಗಣೆ ವ್ಯವಸ್ಥೆ ದಟ್ಟಣೆ ಕಡಿಮೆ ಆಗುತ್ತದೆ.

 ಸದ್ಯಬೆಂಗಳೂರು ಸುತ್ತಲೂ ಹೊಂದಿರುವ ರೈಲು ಸೇವೆಗೆ

  1. ಆನೇಕಲ್ ರೋಡ್- ದೇವನಗೊಂದಿ
  2. ದೇವನಗೊಂಧಿ- ದೊಡ್ಡಜಾಲ
  3. ದೇವನಹಳ್ಳಿ-ದೊಡ್ಡಬಳ್ಳಾಪುರ
  4. ದೊಡ್ಡಬಳ್ಳಾಪುರ-ನಿಡವಂದ/ದಾಬಸ್ ಪೇಟ್
  5. ನೆಲಮಂಗಲ- ಬಿಡದಿಗಳಿಗೆ

 ಕೊಂಡಿ ಮಾರ್ಗ 90 ಕಿಮೀ  ಮತ್ತು ಸರ್ವೇ ಆಗಿ ರುವ ಹೊಸ ಮಾರ್ಗದ ಯೋಜನೆ ಬಿಡದಿ-ಆನೆಕಲ್‌ರೋಡ್ [48ಕಿಮೀ] ಓಟ್ಟು 138 ಕಿಮೀ ಸಂಪರ್ಕ ರೈಲ್‌ಕಾರಿಡಾರ್‌ ನಿರ್ಮಿಸಿದರೆ ಅದು ಅನೇಕಲ್, ಬೊಮ್ಮಸಂದ್ರ, ಹೊಸಕೋಟೆ, ಮಾಲೂರು, ಕೋಲಾರದ ನರಸಾಪುರ,  ಐಟಿಐಆರ್ ಪ್ರದೇಶ, ದೇವನಹಳ್ಳಿ-ದೊಡ್ಡಬಳ್ಳಾಪುರ, ದಾಬಸಪೇಟೆ, ತುಮಕೂರು ಸಮೀಪದ ಹಿರೇಹಳ್ಳಿ,ಅಂತರಸನಹಳ್ಳಿ,ಸತ್ಯಮಂಗಲ, ಹಾಗೂ ಬಹು ಪ್ರಾಮುಖ್ಯದ ಇಂಡ್ ಸ್ಟ್ರಿಯಲ್ ನೋಡ್ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನ ವಲಯ ವಸಂತ ನರಸಾಪುರ ನೆಲಮಂಗಲ- ಬಿಡದಿ, ಕನಕಪುರ, ಹೀಗೆ ಈ ಎಲ್ಲಾ ಕೈಗಾರಿಕಾ ವಸಹಾತುಗಳಿಗೆ ರೈಲು ಸಂಪರ್ಕ ನಿರ್ಮಾಣವಾಗಿ ಸಾರಿಗೆ ಸೌಕರ್ಯ ವಾಗುತ್ತದೆ.  ಅದೂ ಅಲ್ಲದೆ ಭವಿಷ್ಯದ ಚೈನೈ-ಬೆಂಗಳೂರು-ತುಮಕೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಮತ್ತುಬೆಂಗಳೂರು-ಮುಂಬೈ ಎಕನಾಮಿಕ್ಸ್ ಕಾರಿಡಾರ್ ಗಳಿಗೆ ಪೂರಕವಾಗಿರುತ್ತದೆ                 

ಈ ಯೋಜನೆಯ ಬಗ್ಗೆ 2017 ರಲ್ಲಿ ಜಿಎಸ್.ಬಸವರಾಜ್, ಹಾಲಿ ಸಂಸದರು ಮತ್ತು ಹಾಲಿ ರಾಜ್ಯ್ ಮಟ್ಟದ ದಿಶಾ ಸಮಿತಿಯ ಸದಸ್ಯರು ಆದ ಶ್ರಿ ಕುಂದರನಹಳ್ಳಿ ರಮೇಶ್‌ರವರುಗಳು , ಇಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ  ಶ್ರೀಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಶ್ರೀ ಸುರೆಶ್ ಪ್ರಭು ಅವರನ್ನು ಈ ಯೋಜನೆ ಬಗ್ಗೆ ಮನವಿ  ಸಲ್ಲಸಿ ಕೋರಲಾಗಿತ್ತು. ರೈಲ್ವೆ ಸಚಿವರು ಮುಂದಿನ ಕ್ರಮಕ್ಕಾಗಿ ರೈಟ್ಸ್ ಸಂಸ್ಧೆಗೆ ವರದಿ ನೀಡಲು ಸೂಚಿಸಿದ್ದರು. ರೈಟ್ಸ್ ಸಂಸ್ಧೆಯು ರಾಜ್ಯಸರಕಾರ ಒಪ್ಪಿಗೆ ಆದೇಶ ನೀಡಿದರೆಈ ಯೋಜನೆ ಜಂಟಿಯಾಗಿ/ ಪಿಪಿಪಿ ಮಾಡೆಲ್ ಮೇಲೆ ನಿರ್ಮಿಸಲು ಇರುವ ಅವಕಾಶದ ವಿವರವಾದ ಅಧ್ಯಯನ ಮಾಡುವುದಾಗಿ ಬಗ್ಗೆ ತಿಳಿಸಿದೆ.

  ಬೆಂಗಳೂರು ಸುತ್ತಮುತ್ತಲ ಕೈಗಾರಿಕಾ ವಸಹಾತುಗಳ ನಡುವೆ ಸಂಪರ್ಕ ವಿರುವಂತಹ   ಹಾಗೂ ಬೆಂಗಳೂರು-ಮೈಸೂರು,ಬೆಂಗಳೂರು-ತುಮಕೂರು,ಬೆಂಗಳೂರು-ಹಾಸನ-ಮಂಗಳೂರು ,ಬೆಂಗಳೂರು-ದೊಡ್ಡಬಳ್ಳಾಪುರ, ಬೆಂಗಳೂರು-ಬಂಗಾರು ಪೇಟೆ-ಹಾಗೂ ಬೆಂಗಳೂರು- ಆನೇಕಲ್-ಹೊಸೂರು ಸಧ್ಯ ಇರುವ ರೈಲುಮಾರ್ಗಗಳಿಗೆ ಸೇರ್ಪಡೆಯಾಗಿ  ರೈಲು/ಗೂಡ್ಸ ರೈಲು ಓಡಾಟಕ್ಕೆ ಪೂರಕವಾಗಿರುತ್ತದೆ.

 ಇದರಿಂದ ಗೂಡ್ಸ ಸಂಚಾರವಲ್ಲದೆ, ಬೆಂಗಳೂರು ನಗರದ ಪಡಸಾಲೆ ನಗರಮತ್ತುಊರುಗಳಿಂದ  ರಾಜಧಾನಿಗೆ ದಿನನಿತ್ಯ ಬರುವ ಉದ್ಯೋಗಿ ಗಳಿಗೆ  ಅಡಚಣೆ ರಹಿತ ಸಮೂಹ ಸಾರಿಗೆ ಸಂಪರ್ಕಸೇವೆಗೆ ಕಾರಣವಾಗುವ ಈ ಯೋಜನೆಯನ್ನು ಕರ್ನಾಟಕ ಸರಕಾರ ಮತ್ತು ರೈಲ್ವೆ ಸಚಿವಾಲಯ ಜಂಟಿಯಾಗಿನಿರ್ಮಿಸಿದರೆ ಇದು ಈಗ ಮಂಜೂರು ಆಗಿರುವ ಮೊದಲನೆಯ ಹಂತದ ಉಪನಗರ ರೈಲು ಯೋಜನೆಗೆ ಮತ್ತುಫ಼ೆರಿ ಫ಼ರಲ್ ರಿಂಗ್ ರೋಡ್, ಆತ್ಮನಿರ್ಭರ್ ಭಾರತ್/ ಕಾಂಪೀಟ್ ವಿತ್ ಚೈನಾ ವೋಕಲ್ ಫ಼ಾರ್ ಲೋಕಲ್ ಪರಿಕಲ್ಪನೆಗೆ, ಇನ್ವೆಸ್ಟ್ ಕರ್ನಾಟಕ 2021 ಪೂರಕವಾಗುವ ಈ ಯೋಜನೆಗೆ ಮಹತ್ವದ್ದಾಗಿದೆ.

 ಮುಖ್ಯಮಂತ್ರಿಗಳಾದ ಸನ್ಮಾನ್ಯ  ಶ್ರೀಬಿಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಶ್ರೀ ಸುರೆಶ್ ಪ್ರಭು ಅವರನ್ನು ಈ ಯೋಜನೆ ಬಗ್ಗೆ ಮನವಿ  ಸಲ್ಲಸಿ ಕೋರಲಾಗಿದ್ದರಿಂದ, ಈಗ ಅವರೇ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದಲೂ ,ಹಾಲಿಸಂಸದರಾದ ಶ್ರೀ ಜಿಎಸ್.ಬಸವರಾಜ್ ಮತ್ತು ರಾಜ್ಯ್ ಮಟ್ಟದ ದಿಶಾ ಸಮಿತಿಯ ಸದಸ್ಯರು ಆದ ಶ್ರಿ ಕುಂದರನಹಳ್ಳಿ ರಮೇಶ್‌ರವರುಗಳು ಅವರೇ ಪ್ರಸ್ಥಾವ ಮಾಡಿದ್ದ ಈ ಯೋಜನೆ ಸಾಕಾರ ಆಗಲು ಯಾವ ರೀತಿ ಕ್ರಮ ವಹಿಸುತ್ತಾರೆಂದು ಕಾದು ನೋಡಬೇಕಿದೆ.

                                                                                                                ಟಿ.ಆರ್.ರಘೋತ್ತಮರಾವ್