30th April 2024
Share

TUMAKURU:SHAKTHIPEETA FOUNDATION

 ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಎಂಬ ಘೋಷಣೆಗೆ ಪೂರಕವಾಗಿ ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳ ಡಿಜಿಟಲ್ ಮಾಹಿತಿ, ಮಾಲೀಕತ್ವದ ಇಲಾಖೆ, ನೀರಿನ ಸಾಮಾರ್ಥ್ಯ, ಹೇಮಾವತಿ ನದಿ ನೀರಿನಿಂದ ತುಂಬುವ ಕೆರೆಗಳು, ಭದ್ರಾ ಮೇಲ್ಧಂಡೆ ಯೋಜನೆ ನೀರಿನಿಂದ ತುಂಬುವ ಕೆರೆಗಳು, ಎತ್ತಿನ ಹೊಳೆ ಯೋಜನೆ ನೀರಿನಿಂದ ತುಂಬುವ ಕೆರೆಗಳು, ತುಂಗಾ ಭಧ್ರಾ ಯೋಜನೆ ನೀರಿನಿಂದ ತುಂಬುವ ಕೆರೆಗಳು, ಕೆರೆ-ಕಟ್ಟೆಗಳಿಲ್ಲದ ಗ್ರಾಮಗಳಲ್ಲಿ ಜಲಸಂಗ್ರಹಾಗಾರ ನಿರ್ಮಾಣ, ಯಾವುದೇ ನದಿ ನೀರಿನಿಂದ ತುಂಬದೇ ಇರುವ ಕೆರೆ-ಕಟ್ಟೆಗಳ ಪಟ್ಟಿ ಸಿದ್ಧಪಡಿಸಲು ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸೂಚಿಸಿದ್ದರು.

  ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಟ್ಸ್ ಸಂಪೂರ್ಣವಾಗಿ ವರದಿ ಸಿದ್ಧಪಡಿಸಿದೆ, ಬಹುತೇಕ ಎಲ್ಲಾ ಇಲಾಖೆಗಳು ಸ್ಪಂಧಿಸಿ ಮಾಹಿತಿ ನೀಡಿವೆ. ಇಲಾಖೆಗೆ ವರದಿ ಸಲ್ಲಿಸುವ ಮುನ್ನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಕೇಂದ್ರದ ತಾಂತ್ರಿಕ ನಿರ್ದೇಶಕರಾದ  ಶ್ರೀ ಕೆ.ಜೈಪ್ರಕಾಶ್‌ರವರ ತಂಡ ತಪಾಸಣೆ ಮಾಡಿದೆ. 

 ಯಾವ ಗ್ರಾಮದ ಕೆರೆಗೆ, ಯಾವ ನದಿ ನೀರಿನಿಂದ ಗುರುತ್ವಾಕರ್ಷಣೆಯಿಂದ ನೀರು ಹರಿಯಲಿದೆ, ಯಾವ ಕೆರೆಗೆ ಲಿಪ್ಟ್ ಮಾಡಬೇಕು, ಹಾಲಿ ಇರುವ ಅಲೋಕೇಷನ್ ಜೊತೆಗೆ ಇನ್ನೂ ಎಷ್ಟು ಪ್ರಮಾಣದ ನದಿ ನೀರು ಕೆರೆಗಳನ್ನು ತುಂಬಿಸಲು ಬೇಕಾಗುವುದು, ಯಾವ ನದಿ ನೀರನ್ನು ತರಬಹುದು ಎಂಬ ಬಗ್ಗೆಯೂ ಮಾಹಿತಿ ಇದೆ.

 ಗ್ರಾಮವಾರು, ಗ್ರಾಮ ಪಂಚಾಯಿತಿವಾರು, ವಿಧಾನಸಭಾ ಕ್ಷೇತ್ರವಾರು, ತಾಲ್ಲೂಕುವಾರು, ಲೋಕಸಭಾ ಕ್ಷೇತ್ರವಾರು, ಬೇಸಿನ್‌ವಾರು ಹೀಗೆ ಯಾವ ವ್ಯಾಪ್ತಿಯ ಮಾಹಿತಿ ಬೇಕೋ? ಅದು ಜಿಐಎಸ್ ಲೇಯರ್‍ಸ್‌ವಾರು  ಬೆರಳ ತುದಿಯಲ್ಲಿ ದೊರೆಯಲಿದೆ. 

ಈ ಮಾಹಿತಿಯನ್ನು ದಿನಾಂಕ:21.11.2020 ರಂದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪಿಪಿಟಿ ಮೂಲಕ ಪ್ರದರ್ಶಿಸಿದಾಗ ದಿಶಾ ಸಮಿತಿಯ ಸದಸ್ಯರಾದ ಕುಂದರನಹಳ್ಳಿ ರಮೇಶ್ ಇಂಜಿನಿಯರ್‌ಗಳಿಗೆ ಕೇಳಿದ ಪ್ರಶ್ನೆಗಳ ಸುರಿಮಳೆ.

  1. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಶ್ರೀ ಮಾಧುಸ್ವಾಮಿಯವರು ಈ ವರದಿ ನೋಡಿದ್ದಾರಾ? 
  2. ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯ ಸ್ವಾಮಿರವರು ಈ ವರದಿ ನೋಡಿದ್ದಾರಾ?
  3. ತುಮಕೂರು ಜಿಲ್ಲೆಯ ಇತರ ಸಂಸದರು ಮತ್ತು ಎಲ್ಲಾ ವಿಧಾನಸಭಾ ಕ್ಷೇತ್ರದ ಸದಸ್ಯರು ಈ ವರದಿ ನೋಡಿದ್ದಾರಾ?
  4. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್‌ರವರು ಈ ವರದಿ ನೋಡಿದ್ದಾರಾ?

  ಇಂಜನಿಯರ್‌ಗಳು ಪ್ರತಿಕ್ರಿಯಿಸಿ ಇಲ್ಲ ಸಾರ್, ಅವರೆಲ್ಲರಿಗೂ ಈ ವರದಿ ನೀಡಿ ಒಂದು ವಾರದಲ್ಲಿ ಅವರ ಅಭಿಪ್ರಾಯವನ್ನು ಪಡೆಯಲಾಗುವುದು  ಎಂಬ ಉತ್ತರಕ್ಕೆ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು ಖಡಕ್ ಆಗಿ ಪ್ರತಿಯೊಬ್ಬರ ಸಲಹೆ ಪಡೆಯಿರಿ ಎಂದು ನಿರ್ದೇಶನ ನೀಡಿದರು.

 ಸಂಶೋಧನೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 4062 ಕೆರೆ- ಕಟ್ಟೆಗಳಿವೆ, ಇದರಲ್ಲಿ ವಿವಿಧ ಇಲಾಖೆಗಳ ದಾಖಲೆ ಪ್ರಕಾರ 1576 ಕೆರೆ-ಕಟ್ಟೆಗಳಿಗೆ ಮಾತ್ರ ಮಾಲೀಕತ್ವ ಇಲಾಖೆಗಳು ಇವೆ. ಉಳಿದ 2486 ಕೆರೆ-ಕಟ್ಟೆಗಳಿಗೆ ಮಾಲೀಕತ್ವ ಇಲಾಖೆ ಯಾವುದು? ಇದನ್ನು ಪತ್ತೆ ಹಚ್ಚುವ ಕೆಲಸ ಯಾರು ಮಾಡಬೇಕು? ಎಂಬ ಶ್ರೀ ಜಿ.ಎಸ್.ಬಸವರಾಜ್‌ರವರ ಎಂಬ ಸಲಹೆಗೆ ಸ್ವತಃ ಜಿಲ್ಲಾಧಿಕಾರಿಯವರಾದ ಶ್ರೀ ಡಾ.ರಾಕೇಶ್ ಕುಮಾರ್ ರವರು ನಾನೇ ಖುದ್ಧಾಗಿ ಪರಿಶೀಲಿಸಿ, 330 ಗ್ರಾಮಪಂಚಾಯಿತಿವಾರು ಮತ್ತು 11 ನಗರ ಸ್ಥಳೀಯ ಸಂಸ್ಥೆವಾರು ತಾಳೆ ಹಾಕಿಸಿ, ಪಕ್ಕಾ ಡೇಟಾ ಮಾಡಿ, ಸಚಿವರ, ಸಂಸದರ ಮತ್ತು ಶಾಸಕರ ಗಮನಕ್ಕೆ ತಂದು, ಅವರ ಸಲಹೆಗಳನ್ನು ಸ್ವೀಕರಿಸಿ ರಾಜ್ಯ ಮಟ್ಟದ ದಿಶಾ ಸಮಿತಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.