26th July 2024
Share

TUMAKURU:SHAKTHIPEETA FOUNDATION

ಹೇಮಾವತಿ ತುಮಕೂರು ನಾಲಾ ಆಧುನೀಕರಣಕ್ಕೆ ದಿನಾಂಕ:18.03.2020  ರಂದು ಸರ್ಕಾರಿ ಆದೇಶವಾದರೂ ಇದೂವರೆಗೂ ಟೆಂಡರ್ ಕರೆದಿಲ್ಲ. ಕೆಲಸ ಮಾಡದ ಅಧಿಕಾರಿಗಳನ್ನು ಕಾನೂನು ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಜಾಡಿಸಿ ಒದ್ದರೇ ಎನ್ನುತ್ತಾರೆ, ಕೆಲಸ ಮಾಡದ ಚುನಾಯಿತ ಜನಪ್ರತಿನಿಧಿಗಳನ್ನು ರೈತರು ಏನು ಅನ್ನಲು ಸಾಧ್ಯಾ?

ಕೇವಲ 15 ದಿವಸ ಚುನಾವಣಾ ಸಮಯದಲ್ಲಿ ಮಾತ್ರ ಮತದಾರರೇ ಪ್ರಭುಗಳು, ಉಳಿದ ಎಲ್ಲಾ ಕಾಲ ಮತದಾರರು—-? ಅಪ್ಪಾಜಿ, ಅಣ್ಣಾ ಅನ್ನ ಬಹುದಷ್ಟೆ?

ತುಮಕೂರು ಜಿಲ್ಲೆಗೆ ಹೇಮಾವತಿ ಒಂದು ವರದಾನವೇ ಹೌದು. ಆರಂಭದಿಂದಲೂ ಹಾಸನ / ತುಮಕೂರು ವಾಗ್ವಾಧ ನಡೆದೇ ಇದೆ. ತುಮಕೂರು ನಾಲಾ ಕಾಲುವೆ ಸಾಮಾರ್ಥ್ಯ 1445 ಕ್ಯುಸೆಕ್ಸ್ ಎಂದಿದ್ದರೂ ಅದು ಪುಸ್ತಕದಲ್ಲಿ ಮಾತ್ರ. ಸುಮಾರು 700 ಕ್ಯಸೆಕ್ಸ್ ನೀರಿನ ಸಾಮಾರ್ಥ್ಯ ಮಾತ್ರ ಇದೂವರೆಗೂ ಇದ್ದಿದ್ದು.

ಮಾನ್ಯ ಶ್ರೀ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರು ಮತ್ತು ಶ್ರೀ ಟಿ.ಬಿ.ಜಯಚಂದ್ರರವರ ದಿಟ್ಟ ನಿಲುವು, 0 ಕೀಮೀ 70 ನೇ ಕೀಮೀ ವರೆಗೂ ನಿಗದಿತ ಸಮಯದಲ್ಲಿ ಆದ ಕೆಲಸ ನಿಜಕ್ಕೂ ಅಧ್ಭುತ, ಪಕ್ಷಾತೀತವಾಗಿ ಅವರೆಲ್ಲರನ್ನೂ ತುಮಕೂರು ನಾಗರೀಕರು ಸನ್ಮಾನ ಮಾಡ ಬೇಕಿತ್ತು.

 ಮಾನ್ಯ ಹೆಚ್.ಡಿ.ಕುಮಾರಸ್ವಾಮಿರವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಸಂಸದ ಶ್ರೀ ಡಿ.ಕೆ.ಸುರೇಶ್ ರವರು ಮತ್ತು ಕುಣಿಗಲ್ ಶಾಸಕರಾದ ಶ್ರೀ ಡಾ.ರಂಗನಾಥ್‌ರವರು ಎಕ್ಸ್ ಪ್ರೆಸ್ ಕೆನಾಲ್/ ಲಿಂಕಿಂಗ್ ಕೆನಾಲ್  ಪವಾಡ ಮಾಡಲು ಹೋಗಿ ಇಡೀ ಜಿಲ್ಲೆಯ ಜನರ ವಿರೋಧ ಕಟ್ಟಿಕೊಂಡರು. ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರ ಸೋಲಿಗೆ ಈ ಯೋಜನೆ ಮುನ್ನುಡಿ ಬರೆದಿತ್ತು ಎಂದರೆ ಅತಿಶಯೋಕ್ತಿ ಆಗಲಾರದು.

‘ಈ ಯೋಜನೆ ಲೋಪ ಎತ್ತಿಕೊಂಡು, ಲೋಕಸಭಾ ಚುನಾವಣಾ ಸಮಯದಲ್ಲಿ ಶ್ರೀ ಹೆಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬವನ್ನು ಹಿಗ್ಗಾ-ಮುಗ್ಗಾ ಜರಿದಿದ್ದ ನಾಯಕರ ಪೌರುಷ ಈಗ ಎಲ್ಲಿ ಹೋಯಿತು? ಎಂದು ಮತದಾರ ಪ್ರಭುಗಳು ವಿಲ-ವಿಲ ಒದ್ದಾಡುತ್ತಿದ್ದಾರೆ’

ಮೊದಲು ಈ ವಿಚಾರ ಬಯಲಿಗೆ ತಂದಿದ್ದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ನಂತರ ಶ್ರೀ ಜಿ.ಎಸ್.ಬಸವರಾಜ್‌ರವರು ಮಾತ್ರ ಈ ವಿಚಾರವನ್ನು ನಂಬಿದರು. ಉಳಿದ ಎಲ್ಲಾ ನಾಯಕರು ಇದೊಂದು ಫೇಕ್‌ನ್ಯೂಸ್ ಎಂದರು. ಆಡಳಿತ ಪಕ್ಷದ ನಾಯಕರಿಗೆ ಬಿಸಿತುಪ್ಪವಾಗಿ ಬೀದಿಗೆ ಇಳಿಯಲಿಲ್ಲ, ಜಿ.ಎಸ್.ಬಸವರಾಜ್‌ರವರು ಒಂಟಿಯಾಗಿ ಬೀದಿಗಿಳಿದರು, ಜಿಲ್ಲೆಯ ಜನತೆಯ ಪಾಲಿಗೆ ಹೀರೋ ಅದರು.

 ನಂತರ ಈ ವಿಚಾರದಲ್ಲಿ ಕುಣಿಗಲ್ ಶಾಸಕರಾದ ಶ್ರೀ ಡಾ.ರಂಗನಾಥ್ ರವರನ್ನು ಬಿಟ್ಟರೇ ಪಕ್ಷಾತೀತವಾಗಿ ಎಲ್ಲಾ ಪಕ್ಷದ ನಾಯಕರು ಒಗ್ಗಟ್ಟು ಆಗಿದ್ದು ಜಿಲ್ಲೆಯ ಪಾಲಿಗೆ ಒಂದು ಇತಿಹಾಸವೇ.

 ಅಂದಿನ ಉಪಮುಖ್ಯ ಮಂತ್ರಿಗಳಾದ ಡಾ. ಜಿ.ಪರಮೇಶ್ವರ್‌ರವರು ಸಭೆ ನಡೆಸಿ ಎಲ್ಲಾ ನಾಯಕರು ಸಹಿ ಮಾಡಿ ಪತ್ರ ನೀಡಿದರು, ಯೋಜನೆ ನಿಲ್ಲಿಸಲು ಆಗಲೇ ಇಲ್ಲ. ಸಚಿವ ಸಂಪುಟದ ಅನುಮೋದನೆ ಆಗಿದ್ದು ನಿಜಕ್ಕೂ ಖಂಡನೀಯ. ಅಂದು ಜಿಲ್ಲೆಯ ಎಲ್ಲಾ ನಾಯಕರ ಸಹಿಯನ್ನು ಮಾಡಿಸಲು ಮಾಧುಸ್ವಾಮಿಯವರೇ ಮಂಚೂಣೆಯಲ್ಲಿದ್ದರು’

  ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಹೋರಾಟದ ಫಲಕ್ಕೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿರವರು   ಜಿಲ್ಲೆಯ ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದ್ದರು. ಆದರೇ ಇದೂವರೆಗೂ ಟೆಂಡರ್ ಆಗದೇ ಇರುವುದರಿಂದ ಅವರ ಮಾತು ಸುಳ್ಳಾಗಿವೆ ಎನ್ನುತ್ತಾರೆ ರೈತ ಸಂಘದ ಶ್ರೀಮತಿ ಉಮಾದೇವಿಯವರು.

  ಹೇಮಾವತಿ ತುಮಕೂರು ಬ್ರಾಂಚ್ 0  ಕೀಮೀ ನಿಂದ 70 ನೇ ಕೀಮೀ ವರೆಗೆ ಕಳೆದ ಸರ್ಕಾರ ರೂ 475 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದ ನಾಲಾ ಆಧುನೀಕರಣಕ್ಕೆ ಈಗಿನ ಸರ್ಕಾರ ಶಂಕುಸ್ಥಾಪನೆ ಮಾಡಿದೆ. ಯೋಜನೆ ಪ್ರಗತಿಯಲ್ಲಿದೆ.

  ಸುಮಾರು ರೂ 614 ಕೋಟಿ ವೆಚ್ಚದಲ್ಲಿನ 70 ಕೀಮೀ ನಿಂದ 166.50 ಕೀಮೀವರೆಗಿನ ಲಿಂಕಿಂಗ್ ಕೆನಾಲ್  ರದ್ದು ಪಡಿಸಿ, ರೂ 550 ಕೋಟಿ ವೆಚ್ಚದಲ್ಲಿ ಹೇಮಾವತಿ ತುಮಕೂರು ಬ್ರಾಂಚ್ 70 ನೇ ಕೀಮೀ ನಿಂದ 166.90 ನೇ ಕೀಮೀ ವರೆಗೆ ನಾಲಾ ಆಧುನೀಕರಣ ಮಾಡಲು ಸಿದ್ಧತೆ ನಡೆದಿದ್ದರೂ, ಈವರೆಗೂ  ನೆನೆಗುದಿಗೆ ಬಿದ್ದಿದೆ.

   ಈ ಯೋಜನೆ ಟೆಂಡರ್ ಕರೆಯದೇ ಇರುವುದು ನೀಗೂಢವಾಗಿದೆ. ಹಣಕಾಸು ಇಲಾಖೆಯ ಅನುಮತಿ ಸಿಕ್ಕಿಲ್ಲ ಎನ್ನಲೂ ಕಾರಣವೇ ಇಲ್ಲ, ರೂ 614  ಕೋಟಿಗೆ ಹಿಂದಿನ ಸಚಿವ ಸಂಪುಟ ಅನುಮೋದನೆ ನೀಡಿದ ಕೆಲಸ ರದ್ಧು ಪಡಿಸಿ, ಕೇವಲ ರೂ 550 ಕೋಟಿ ಹಣ ಬಿಡುಗಡೆಗೆ ಏಕೆ ಇನ್ನೂ ಅನುಮತಿ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತದೆ.

ಶ್ರೀ ಡಿ.ಕೆ.ಶಿವಕುಮಾರ್‌ರವರು ಮತ್ತು ಶ್ರೀ ಡಿ.ಕೆ.ಸುರೇಶ್‌ರವರ ಪ್ರಭಾವ ಎಂದು ಜನತೆ ಗೊಣಗುಟ್ಟುತ್ತಿದ್ದಾರೆ. ಸತ್ಯಾಂಶವನ್ನು ಮಾಧುಸ್ವಾಮಿಯವರೇ ಹೇಳಬೇಕು?’

 ಅದೇನೆ ಇರಲಿ ಹಣಕಾಸು ಇಲಾಖೆ ಕೊಕ್ಕೆ ಸರಿಪಡಿಸಿ, ಶೀಘ್ರವಾಗಿ ಜಿಲ್ಲೆಯ ನಾಯಕರು ಹಣ ಬಿಡುಗಡೆ ಮಾಡಿಸುವ ಭರವಸೆಯಿದೆ. ದಿನಾಂಕ:11.01.2021 ರಂದು ಹೇಮಾವತಿ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ಇರುವುದರಿಂದ ಅಂದೇ ಜಿಲ್ಲೆಯ ಎಲ್ಲಾ ನಾಯಕರು ಒಗ್ಗಟ್ಟಾಗಿ ಮಾನ್ಯ ಮುಖ್ಯಮಂತ್ರಿಯವರ ಗಮನ ಸೆಳೆಯುವರೇ ಕಾದು ನೋಡಬೇಕು?

ಮಾರ್ಚ್ ಮುಗಿದರೇ ಮಾಡಿದ್ದೆಲ್ಲಾ ಗೋವಿಂದ! ಗೋವಿಂದ!! ಗೋವಿಂದ!!!