28th March 2024
Share

TUMAKURU:SHAKTHIPEETA FOUNDATION

 ದೇಶದ ಪ್ರತಿ ಜಿಲ್ಲೆಯಲ್ಲೂ ರೈತರ ಆದಾಯವನ್ನು ದುಪಟ್ಟು ಮಾಡಲು, ಒಂದು ಜಿಲ್ಲೆ- ಒಂದು ಉತ್ಪನ್ನ’ ಎಂಬ ಯೋಜನೆಯನ್ನು ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಜಾರಿಗೊಳಿಸಿದ್ದಾರೆ. ಶೇ 35 ಸಹಾಯಧನ, ಬಡ್ಡಿಯೂ ಕಡಿಮೆ.

 ‘ತುಮಕೂರು ಜಿಲ್ಲೆಗೆ ಯೋಜನೆಯಡಿಯಲ್ಲಿ ತೆಂಗು ಉತ್ಪನ್ನಗಳನ್ನು ಆಯ್ಕೆ ಮಾಡಿ ಘೋಶಿಸಿದ್ದಾರೆ. ತೆಂಗು, ನಾರು, ಕಾಯಿ, ಎಳನೀರು, ಕೊಬ್ಬರಿ, ಮರ, ಬೇರು, ಗರಿ, ಗರಿಕಡ್ಡಿ, ಚುಪ್ಪು, ಕರುಂಬಳೆ ಹೀಗೆ ಹಲವಾರು ತೆಂಗಿನ ಸುಮಾರು 150 ಕ್ಕಿಂತ ಹೆಚ್ಚಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸ ಬಹುದು’

 ಹಾಲಿ ಕೈಗಾರಿಕೆ ಇರುವವರು ಹಾಗೂ ಹೊಸದಾಗಿ ಮಾಡುವ ವ್ಯಕ್ತಿ ಮತ್ತು ಯಾವುದೇ ವಿಧವಾದ ಸಂಘಸಂಸ್ಥೆಗಳು, ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ಒಂದು ಅರ್ಜಿಯನ್ನು ಕೊಟ್ಟರೆ ಮನೆ ಬಾಗಿಲಿಗೆ ಸರ್ವಿಸ್ ನೀಡಲು ಜಿಲ್ಲಾಡಳಿತ ಸಜ್ಜಾಗಲಿದೆ.

ಮೋದಿಯವರೇ ಜಿಲ್ಲೆಗೆ ಇಬ್ಬರು ಸಲಹಾಗಾರರು, ಅಂದರೆ ಪಾಜೆಕ್ಟ್ ರಿಪೋರ್ಟ್ ಮಾಡುವವರನ್ನು ನೇಮಿಸಲು ಅವಕಾಶ ಕಲ್ಪಿಸಿದ್ದಾರೆ. ಅವರಿಂದಲೇ ಯೋಜನಾವರದಿ ಮಾಡಿಸಬೇಕು. ಅವರ ಆಯ್ಕೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಮಾಡಬೇಕು. ಜೊತೆಗೆ ಒಬ್ಬ ಪರಿಣಿತರನ್ನು ಸಮಿತಿಗೆ ನಾಮನಿರ್ದೇಶನ ಮಾಡಬಹುದು.

 ಈ ಮೂವರು ಜನರ ಬಳಿಗೆ ಹೋಗಲು ಸಿದ್ಧರಿರಬೇಕು, ತೆಂಗಿನ ಉತ್ಪನ್ನಗಳ ಎಲ್ಲಾ ಯೋಜನೆಗಳ ಅರಿವು ಇರಬೇಕು. ಜಿಲ್ಲೆಯಲ್ಲಿ ಹಾಲಿ ಇರುವ ತೆಂಗಿನ ಉತ್ಪನ್ನಗಳ ಕೈಗಾರಿಕೆಗಳ ಸಂಪೂರ್ಣ ಮಾಹಿತಿ ಇರಬೇಕು. ತೆಂಗಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳ ಸಂಪರ್ಕ ಹೊಂದಬೇಕು. 

ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಪಿಡಿಓ ಮತ್ತು ಚೀಫ್ ಆಫೀಸರ್, ಆಯುಕ್ತರು ಹೀಗೆ ಎಲ್ಲರ ಜೊತೆ ಚರ್ಚಿಸಿ, ನವ ಉದ್ಧಿಮೆದಾರರನ್ನು, ಸ್ಟಾರ್ಟ್ ಆಫ್ ಕನಸುಗಾರರನ್ನು, ಹಾಲಿ ಇರುವ ಕೈಗಾರಿಕೆಗಳ ಉದ್ಧಿಮೆದಾರರನ್ನು ಗುರುತಿಸಿ ತೆಂಗಿನಲ್ಲಿ ಸರ್ವಜ್ಞರಂತಾಗಲು ಸಿದ್ಧರಿರಬೇಕು. ಜಿಐಎಸ್ ಜ್ಞಾನ ಮತ್ತು ಸೋಶಿಯಲ್ ಮೀಡಿಯಾ ಜ್ಞಾನವಿರಬೇಕು.

 ಉದ್ದಿಮೆದಾರರ, ರೈತರ, ಇಲಾಖೆಗಳ, ಮತ್ತು ಬ್ಯಾಂಕುಗಳ ಕೊಂಡಿಯಂತೆ ಕೆಲಸ ಮಾಡಲು ಸಿದ್ದರಿರುವವರನ್ನು ಜಿಲ್ಲಾಧಿಕಾರಿಯವರು ನೇಮಿಸಬೇಕು. ಈ ಮೂವರು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಅವರ ಕಲ್ಪನೆಯ ಪಿಪಿಟಿ ಪ್ರದರ್ಶನ ಮಾಡಬೇಕು. ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಸದಸ್ಯರು ಕೇಳುವ  ಮಾಹಿತಿಗಳನ್ನು ನೀಡಲು ಸಿದ್ಧರಿರಬೇಕು.

 ‘ಸಾಲ ಪಡೆಯುವವರು ತರಬೇತಿ ಪಡೆಯಲೇಬೇಕು. ರಫ್ತು ಉದ್ದಿಮೆ ಆರಂಭಿಸುವವರು ವಿವಿದ ದೇಶಗಳ ಭಾಷೆ ಕಲಿಸುವ ತರಗತಿಗಳಿಗೆ ಹಾಜರಾಗಬೇಕು, ಉದ್ದಿಮೆಗಳನ್ನು ಕಡ್ಡಾಯವಾಗಿ ಸ್ಥಾಪನೆ ಮಾಡುವವರಿಗೆ ಸಾಲ ಗ್ಯಾರಂಟಿ ದೊರೆಯಲಿದೆ. ಎಲ್ಲಾ ವಿಧವಾದ ಉತ್ಪನ್ನಗಳ ತರಬೇತಿಗಳು ಮತ್ತು ವಿವಿಧ ದೇಶದ ಭಾಷೆ ಕಲಿಸಲು ಈಗಾಗಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಿದ್ಧತೆ ಮಾಡುತ್ತಿದ್ದಾರೆ’

ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಈ ಯೋಜನೆಯನ್ನು ದೇಶಕ್ಕೆ ಮಾದರಿ ಮಾಡಲು ಚಿಂತನೆ ನಡೆಸಿದ್ದಾರೆ. ಎಂ.ಪಿ.ಸಿ.ಎಸ್ ಮಾದರಿಯಲ್ಲಿ ತೆಂಗಿನ ಉತ್ಪನ್ನಗಳ ಸಹಾಕಾರಿ ಸಂಸ್ಥೆಗಳನ್ನು ಸ್ಥಾಪಿಸಲು ಆಸಕ್ತಿ ಇರುವವರು ಮುಂದೆ ಬನ್ನಿ. ತೆಂಗಿನ ರೈತರ ಬದುಕು ಹಸನು ಮಾಡಿ.   

ಸಾಲ ಬೇಕೆ ಸಾಲ – ಮೋದಿ ಸಾಲ – ತೆಂಗಿನ ಸಾಲ’ ಕೃಷಿ ಇಲಾಖೆಗೆ ಒಂದು ಅರ್ಜಿಹಾಕಿ ಸಾಕು,  ಮುಂದೆ ನೋಡೋಣ. ಈ ಬಗ್ಗೆ ಡಿಜಿಟಲ್ ಆಂದೋಲನ ಆರಂಭವಾಬೇಕು. ಕೆಲವು ಸಂಸ್ಥೆಗಳು ಈ ಬಗ್ಗೆ ಚಿಂತನೆ ಆರಂಭಿಸಿವೆ, ಹಾಲಿನ ಕುರಿಯನ್ ಮಾದರಿಯಲ್ಲಿ  ತೆಂಗಿನ ಕುರಿಯನ್ ಒಬ್ಬನ ಉದಯ ಆಗಲೇ ಬೇಕು’  ಆಸಕ್ತಿ ಇರುವ ಸಹಕಾರಿ ಧುರೀಣರಿಗೆ ಇದೊಂದು ಸುರ್ವರ್ಣ ಅವಕಾಶ.

 ಕಲ್ಪನಾ ವರದಿಯೊಂದಿಗೆ ಕೊಕೊನೆಟ್ ಸ್ಪೆಷಲ್ ಎಕನಾಮಿಕ್ ಝೋನ್’ ಸ್ಥಾಪನೆಗೆ ಬೇಸ್ ಸಿದ್ಧವಾಗುತ್ತಿದೆ. ಹಳೆಯ ಕಡತಕ್ಕೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತೆ ಚಾಲನೆ ನೀಡಿದೆ. ಪರಿಣಿತರೇ  ನೀವೂ ಕೈಜೋಡಿಸಿ.

‘ಸಿಪಿಓಗಳು ಮತ್ತು ಎಫ್‌ಫಿಓಗಳು ಸ್ವಲ್ಪ ಹೊರಗೆ ಬನ್ನಿ, ರಾಜಕೀಯ ಬಿಡಿ, ಮುನ್ನುಗ್ಗಿ ಟೀಕೆ ಮಾಡುವವರು, ತೊಂದರೆ ಕೊಡುವವರು, ಇರುವುದು ಸಹಜ, ಅದಕ್ಕೆಲ್ಲಾ ಎದೆಗುಂದದೆ ಮುಂದೆ ಬನ್ನಿ. ಇಲ್ಲವೇ ಸಂಸ್ಥೆಗಳನ್ನು ಮುಚ್ಚಿ ಬಿಡಿ, ಮೌನವಾಗಿ ಇರಬೇಡಿ ದಯವಿಟ್ಟು ಕಳಕಳಿಯ ಮನವಿ. ನೀವುಗಳ ಯೋಜನೆಗೆ ಬೇಸ್ ಆಗಲೇ ಬೇಕು’