20th April 2024
Share
ಚಿತ್ರದಲ್ಲಿ ಶಿರಾ ತಹಶೀಲ್ಧಾರ್ ಶ್ರೀಮತಿ ಮಮತ, ಶ್ರೀ ಎ.ಆರ್.ಮಂಜುಪ್ರಸಾದ್, ಶ್ರೀ ಶಶಿ ಮತ್ತು ಕುಂದರನಹಳ್ಳಿ ರಮೇಶ್ ಇದ್ದಾರೆ.

TUMAKURU:SHAKTHIPEETA FOUNDATION

 ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಕನಸಿನಂತೆ ಕರ್ನಾಟಕ ಹೆರಿಟೇಜ್ ಹಬ್ ಆರಂಭಿಸಬೇಕು ಎಂಬ ಪರಿಕಲ್ಪನೆಯಿಂದ ಆಗಿನ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್  ಅಧ್ಯಕ್ಷತೆಯಲ್ಲಿ ದಿನಾಂಕ:21.06.2016  ರಂದು ಕರ್ನಾಟಕ ಹೆರಿಟೇಜ್ ಹಬ್   ಎಂಬ ಸೊಸೈಟಿಯನ್ನು ಹುಟ್ಟು ಹಾಕಿದರು.

 ಯೋಜನೆಗೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾರನಗೆರೆ ಮತ್ತು ಉಜ್ಜನಕುಂಟೆ ಗ್ರಾಮಗಳಲ್ಲಿ 811 ಎಕರೆ 14 ಗುಂಟೆ ಜಮೀನು ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾಮದಲ್ಲಿ  108 ಎಕರೆ 06 ಗುಂಟೆ ಜಮೀನು ಸೇರಿದಂತೆ 919 ಎಕರೆ 20 ಗುಂಟೆ ಜಮೀನು ನಿಗದಿ ಮಾಡಲಾಗಿತ್ತು.

 ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಚಾಲನೆ ನೀಡಲು ಇತ್ತೀಚೆಗೆ ಶಿರಾ ನೂತನ ಶಾಸಕರಾದ ಶ್ರೀ ರಾಜೇಶ್ ಗೌಡರವರೊಂದಿಗೆ ಸಮಾಲೋಚನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿರಾ ತಹಶೀಲ್ಧಾರ್ ಕಚೇರಿಗೆ ಭೇಟಿ ನೀಡಿ ಜಮೀನಿನ ಕಡತದ ಬಗ್ಗೆ ಪರಿಶೀಲಿಸಿದಾಗ ಕಡತ ದೊರೆಯಲಿಲ್ಲ.

 ನಂತರ ಕರ್ನಾಟಕ ಹರಿಟೇಜ್ ಹಬ್ ಸದಸ್ಯ ಕಾರ್ಯದರ್ಶಿಯಾಗಿದ್ದ ಶ್ರೀ ರಂಗಸ್ವಾಮಿರವರೊಂದಿಗೆ ಚರ್ಚಿಸಿದಾಗ, ಟೂಡಾ ಆಯುಕ್ತರ ಬಳಿ ಇರುವುದಾಗಿ ತಿಳಿಸಿದ್ದರು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಯೋಗಾನಂದ್ ರವರೊಂದಿಗೆ ಚರ್ಚಿಸಲಾಗಿತ್ತು. ಶ್ರೀಮತಿ ಮಮತ ರವರು ಮಾತನಾಡಿ ದಾಖಲೆ ಹುಡುಕಿ ಅಧ್ಯಯನ ಮಾಡುವುದಾಗಿ ತಿಳಿಸಿದ್ದಾರೆ.

ಚಿತ್ರದಲ್ಲಿ ಶಿರಾ ತಹಶೀಲ್ಧಾರ್ ಶ್ರೀಮತಿ ಮಮತ, ಶ್ರೀ ಎ.ಆರ್.ಮಂಜುಪ್ರಸಾದ್, ಶ್ರೀ ಶಶಿ ಮತ್ತು ಕುಂದರನಹಳ್ಳಿ ರಮೇಶ್ ಇದ್ದಾರೆ.