29th March 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ  ಅಧ್ಯಕ್ಷತೆಯಲ್ಲಿ ದಿನಾಂಕ: 26.06.2014 ರಂದು ಸಚಿವ ಸಂಪುಟ ಸಭೆ ನಿಗದಿಯಾಯಿತು. ಈ ವಿಷಯವನ್ನು ಮಂಡಿಸಲಾಯಿತು.     

   ಅಂದು ಬೆಳಿಗ್ಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಕಚೇರಿಗೆ ಹೋಗಿ ಸಾರ್, ಈ ದಿನದ ಸಚಿವ ಸಂಪುಟದಲ್ಲಿ ಹೆಚ್.ಎ.ಎಲ್ ವಿಚಾರ ಇದೆ, ದಯವಿಟ್ಟು ಎಂದೆ ಆಯಿತು ಎಂದಷ್ಟೆ ಹೇಳಿದರು. ಸಚಿವ ಸಂಪುಟದಲ್ಲಿ ನಿರ್ಣಯವಾಯಿತು. ಇದು ಒಂದು ಅತ್ಯಂತ ಪ್ರಮುಖ ಅಂತಿಮ ಹಂತ ಎಂದರೆ ತಪ್ಪಾಗಲಾರದು.